ಹಾಸನ : ತಾಲ್ಲೂಕಿನ ಮೊಸಳೆಹೊಸಳ್ಳಿ ಬಳಿ ಬೈಕ್ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ. ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹೊಳೆನರಸೀಪುರ ತಾಲ್ಲೂಕು ನ್ಯಾಮನಹಳ್ಳಿ ಗ್ರಾಮದ ದೇವರಾಜ್ (50) ಮತ್ತು ಹಂಗರಹಳ್ಳಿ ಗ್ರಾಮದ ಮಂಜುನಾಥ್ (52) ಮೃತರು. ಇವರು ತರಕಾರಿ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ.
ಭಾನುವಾರ ರಾತ್ರಿ 7.20ರ ಸುಮಾರಿಗೆ ಬೈಕ್ನಲ್ಲಿ ನ್ಯಾಮನಹಳ್ಳಿ ಕಡೆಗೆ ಹೋಗುತ್ತಿದ್ದಾಗ ಹಾಸನ ಕಡೆಯಿಂದ ಸಾರಿಗೆ ಬಸ್ ಬಂದಿದೆ. ಇದರಿಂದ ಗಾಬರಿಗೊಂಡ ಸವಾರ, ಎಡ ಬಲಕ್ಕೆ ಬೈಕ್ ಚಲಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ದಿಢೀರ್ ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಶಾಂತಿಗ್ರಾಮ ಸಿಪಿಐ ಪಿ.ಸುರೇಶ್ ಹಾಗೂ ಗೊರೂರು ಪೊಲೀಸರು ಪರಿಸ್ಥಿತಿ ತಿಳಿಸಿಗೊಳಿಸಿ ಮೃತದೇಹಗಳನ್ನು ಸ್ಥಳಾಂತರಿಸಿದರು.