ಮೈಸೂರು: ಮೈಸೂರಿನ ರೋಟರಿ ಕೃತಕ ಕಾಲುಗಳ ಕೇಂದ್ರದ ವತಿಯಿಂದ ವಿಕಲಚೇತನರಿಗೆ ಉಚಿತ ಕೃತಕ ಕಾಲುಗಳನ್ನು ವಿತರಿಸಲಾಯಿತು.
ನಗರದ ರೋಟರಿ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಕುಶಾಲನಗರ ಸೇರಿದಂತೆ ವಿವಿಧ ಜಿಲ್ಲೆಗಳ 15 ನಿರ್ಗತಿಕರಿಗೆ ಮೊಣಕಾಲಿನ ಮೇಲೆ ಮತ್ತು ಮೊಣಕಾಲಿನ ಕೆಳಗೆ ಕೃತಕ ಕಾಲುಗಳನ್ನು ಶಾಸಕ ಕೆ.ಹರೀಶ್ ಗೌಡ ವಿತರಿಸಿದರು.
ರೋಟರಿ ಮೈಸೂರು ಅಧ್ಯಕ್ಷ ಅರುಣ್ ಬೆಳವಾಡಿ ಅಧ್ಯಕ್ಷತೆ ವಹಿಸಿದ್ದರು. ಆರ್ ಎಂಎಎಲ್ ಸಿ ಅಧ್ಯಕ್ಷ ಡಿ.ರವಿಶಂಕರ್ ಸ್ವಾಗತಿಸಿ, ,ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಗ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಹಲವಾರು ರೊಟೇರಿಯನ್ ಗಳು ಭಾಗವಹಿಸಿದ್ದರು.
ಆರ್.ಎಂ.ಎ.ಎಲ್.ಸಿ.ಯನ್ನು 1997-98ರಲ್ಲಿ ಕಾರ್ಯಾರಂಭ ಮಾಡಲಾಗಿದ್ದು, ಇಲ್ಲಿಯವರೆಗೆ ಉತ್ತಮ ಸೇವೆ ಸಲ್ಲಿಸುತ್ತಿದೆ, ಇದರಿಂದಾಗಿ ಕರ್ನಾಟಕದ ವಿವಿಧ ಜಿಲ್ಲೆಗಳ 10,000 ಕ್ಕೂ ಹೆಚ್ಚು ಅಂಗವಿಕಲರು ಪ್ರಯೋಜನ ಪಡೆದಿದ್ದಾರೆ. ಆರ್ ಎಂಎಎಲ್ ಸಿ ಆರಂಭದಲ್ಲಿ ಬಂಬೂ ಬಜಾರ್ ನಲ್ಲಿ ಮಹಾವೀರ್ ಚಾರಿಟಬಲ್ ಟ್ರಸ್ಟ್ ನೊಂದಿಗೆ ಈ ಸೇವೆಯನ್ನು ಮಾಡುತ್ತಿತ್ತು ಮತ್ತು ನಂತರ ರೋಟರಿ ಮೈಸೂರಿನ ಪ್ಲಾಟಿನಂ ಜುಬಿಲಿ ವರ್ಷದಲ್ಲಿ ತನ್ನದೇ ಆದ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ.