News Karnataka Kannada
Sunday, May 05 2024
ಚಾಮರಾಜನಗರ

ಗುಂಡ್ಲುಪೇಟೆ: ಮೊಲ ಬೇಟೆಯಾಡಿದ್ದ ಇಬ್ಬರ ಬಂಧನ

ಮೊಲವನ್ನ ಬೇಟೆಯಾಡಿ ಅಡುಗೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದ ಜಿ.ಎಸ್.ಬೆಟ್ಟವಲಯ ವ್ಯಾಪ್ತಿಯಲ್ಲಿ ನಡೆದಿದೆ.
Photo Credit : News Kannada

ಗುಂಡ್ಲುಪೇಟೆ: ಮೊಲವನ್ನ ಬೇಟೆಯಾಡಿ ಅಡುಗೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದ ಜಿ.ಎಸ್.ಬೆಟ್ಟವಲಯ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಚೌಡಹಳ್ಳಿ ಗ್ರಾಮದ ಪ್ರಸಾದ್ (49), ಶಿವಪುರ ಗ್ರಾಮದ ಜವರಶೆಟ್ಟಿ(40) ಬಂಧಿತ ಆರೋಪಿಗಳು.

ಬಂಡೀಪುರ ವಲಯದ ಹುಲಿಯಮ್ಮನ ದೇವಸ್ಥಾನದಿಂದ ಚೌಡಹಳ್ಳಿ ಗ್ರಾಮದ ಕಡೆಗೆ ಹೋಗುವ ಮಾರ್ಗದಲ್ಲಿ ಇಬ್ಬರು ಆಸಾಮಿಗಳು ಟಾರ್ಚ್ ಹಿಡಿದು ಬರುವುದನ್ನು ಗಮನಿಸಿದ ಗಸ್ತು ವನಪಾಲಕರು ಉಪ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿನೀಡಿದ್ದಾರೆ.

ನಂತರ ಸ್ಥಳಕ್ಕೆ ಧಾವಿಸಿ ನೋಡಿದಾಗ ಶೆಡ್‌ನೊಳಗೆ ಇಬ್ಬರು ಪಾತ್ರೆಯಲ್ಲಿ ಅಡುಗೆ ಮಾಡುವುದು ಕಂಡು ಬಂದಿದೆ. ನಂತರ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಹುಲಿಯಮ್ಮನ್ನ ದೇವಸ್ಥಾನದ ಕಾಲು ದಾರಿಯಲ್ಲಿ ಕಣಿಯನಪುರ ಉತ್ತರ ಅರಣ್ಯ ಭಾಗದಲ್ಲಿ ಕಾಯ್ದಿಟ್ಟ ಅರಣ್ಯ ಗಡಿಭಾಗದಲ್ಲಿ ಉರುಳು ಹಾಕಿ ಮೊಲ ಭೇಟೆಯಾಡಿರುವುದಾಗಿ ಇಬ್ಬರು ಒಪ್ಪಿಕೊಂಡಿದ್ದಾರೆ.

ಬಂಧಿತರಿಂದ ಬೆಂಕಿಯಲ್ಲಿ ಸುಟ್ಟ ಅರ್ಧ ಮೊಲದ ದೇಹದ ಭಾಗ, ಒಂದು ನಾಡ ಬಂದೂಕು, ಬಂದೂಕಿಗೆ ಬಳಸಿದ ಮದ್ದು ಗುಂಡುಗಳು, ಕತ್ತಿ, ಟಾರ್ಚ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು