ಚಾಮರಾಜನಗರ: ಅರಿಶಿನ ಫಸಲಿನ ಮದ್ಯೆ ಗಾಂಜಾ ಬೆಳೆದಿದ್ದ ಇಬ್ಬರನ್ನ ಪೊಲೀಸರು ಬಂಧಿಸಿ ಬರೋಬ್ಬರಿ 34 ಕೆಜಿಯಷ್ಟು ಹಸಿ ಗಾಂಜಾವನ್ನು ಹನೂರು ಪೋಲಿಸರು ವಶಕ್ಕೆ ಪಡೆದಿರುವ ಘಟನೆ ಆನೆಗುಂದಿ ಗ್ರಾಮದಲ್ಲಿ ನೆಡೆದಿದೆ.
ತಾಲ್ಲೂಕಿನ ಪಿಜಿಪಾಳ್ಯ ಸಮೀಪದ ಆನೆಗುಂದಿ ಗ್ರಾಮದ ಎಸ್.ಬಾಲು(65) ಹಾಗೂ ಇವರ ಪುತ್ರ ಮಹಾಲಿಂಗ(35) ಬಂಧಿತ ಆರೋಪಿಗಳಾಗಿದ್ದಾರೆ.
ಪಿಜಿ ಪಾಳ್ಯ ವ್ಯಾಪ್ತಿಯ ಸರ್ವೆ ನಂಬರ್ 202 ರ ಜಮೀನೊಂದರಲ್ಲಿ ಅರಿಶಿನದ ಫಸಲಿನ ಮದ್ಯೆ ಅಕ್ರಮವಾಗಿ ಗಾಂಜಾ ಬೆಳೆದ ಖಚಿತ ಮಾಹಿತಿ ಮೇರೆಗೆ ಡಿ ವೈಎಸ್ ಪಿ ಸೋಮೇಗೌಡ ಹನೂರು ಇನ್ಸ್ಪೆಕ್ಟರ್ ಶಶಿಕುಮಾರ್ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿತರಿಂದ ಬರೋಬ್ಬರಿ 34 ಕೆಜಿಯಷ್ಟು ಹಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.