News Karnataka Kannada
Wednesday, May 08 2024
ಚಾಮರಾಜನಗರ

ಆನೆ ಸೆರೆಹಿಡಿಯುವಂತೆ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರಿಗೆ ಮನವಿ

ಒಂಟಿ ಆನೆಯ ಉಪಟಳದಿಂದ ಬೇಸತ್ತಿದ್ದ ಹಂಗಳ ಗ್ರಾಮದ ರೈತರು ನೆರೆ ರಾಜ್ಯದ ಅರಣ್ಯ ಸಚಿವರ ಜೊತೆ ಸಮನ್ವಯ ಸಮಿತಿ ಜಂಟಿ ಸಭೆಗೆ ಆಗಮಿಸಿದ್ದ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರಿಗೆ ಆನೆ ಸೆರೆಹಿಡಿಯುವಂತೆ ಮನವಿ ಸಲ್ಲಿಸಿದರು.
Photo Credit : News Kannada

ಗುಂಡ್ಲುಪೇಟೆ: ಒಂಟಿ ಆನೆಯ ಉಪಟಳದಿಂದ ಬೇಸತ್ತಿದ್ದ ಹಂಗಳ ಗ್ರಾಮದ ರೈತರು ನೆರೆ ರಾಜ್ಯದ ಅರಣ್ಯ ಸಚಿವರ ಜೊತೆ ಸಮನ್ವಯ ಸಮಿತಿ ಜಂಟಿ ಸಭೆಗೆ ಆಗಮಿಸಿದ್ದ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರಿಗೆ ಆನೆ ಸೆರೆಹಿಡಿಯುವಂತೆ ಮನವಿ ಸಲ್ಲಿಸಿದರು.

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಸ್ವಾಗತ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಕರ್ನಾಟಕ ಕೇರಳ ತಮಿಳುನಾಡು ಅರಣ್ಯ ಇಲಾಖೆ ಸಚಿವರ ಮಟ್ಟದ ಸಮನ್ವಯ ಸಮಿತಿ ಸಭೆ ಬಳಿಕ ಖಂಡ್ರೆ ಅವರ ಭೇಟಿಗೆ ಕಾಯ್ದಿದ್ದ ಹಂಗಳ ಗ್ರಾಮದ ರೈತರು ಆನೆ ಉಪಟಳ ದಿನೇ ದಿನೇ ಹೆಚ್ಚುತ್ತಿದೆ ರೈತರ ಜಮೀನಿಗೆ ಲಗ್ಗೆ ಹಿಡುವ ಒಂಟಿಯಾನೆ ಫಸಲನ್ನ ನಾಶಪಡಿಸುತ್ತಿದೆ. ಈ ವಿಚಾರವಾಗಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ , ರೈತರ ಬಗ್ಗೆ ನಿರ್ಲಕ್ಷ್ಯತೆ ತೋರುತ್ತಿದ್ದಾರೆ ಎಂದು ಸಚಿವರಿಗೆ ದೂರಿದರು.

ಸಚಿವ ಈಶ್ವರ್ ಖಂಡ್ರೆ ಸಮ್ಮುಖದಲ್ಲೇ ರೈತರು ಮತ್ತು ಅರಣ್ಯಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು, ರೈತರ ಸಮಸ್ಯೆಯನ್ನ ಆಲಿಸಿದ ಸಚಿವ ಶೀಘ್ರದಲ್ಲೇ ಒಂಟಿ ಸಲಗವನ್ನ ಸೆರೆಹಿಡಿದು ಬೇರೆಡೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಿ ಎಂದು ಸಿಎಫ್ ರಮೇಶ್ ಕುಮಾರ್ ಅವರಿಗೆ ಸೂಚನೆ ನೀಡಿದರು. ಒಂಟಿಯಾನೆ ಸೆರೆಹಿಡಿದು ಸ್ಥಳಾಂತರ ಮಾಡದಿದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದು ಸಚಿವ ಈಶ್ವರ್ ಬಿ ಖಂಡ್ರೆ ಭರವಸೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು