ಚಾಮರಾಜನಗರ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜೆಸಿಬಿ ಯಂತ್ರಕ್ಕೆ ಜೋಡಿ ನಾಗರಹಾವು ಸಿಲುಕಿದ ಪರಿಣಾಮ ಒಂದು ಸಾವನ್ನಪ್ಪಿದ್ದು ಇನ್ನೊಂದು ನಾಗರಹಾವನ್ನ ಸ್ನೇಕ್ ಮಧು ಅವರು ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆ ನೀಡಿ ಕಾಡಿಗೆ ವಾಪಾಸ್ ಬಿಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಸವಪ್ಪನದೊಡ್ಡಿಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಸವಪ್ಪನ ದೊಡ್ಡಿ ಗ್ರಾಮದ ರೈತ ಹೊನ್ನಪ್ಪ ಎಂಬವರ ಜಮೀನಿನಲ್ಲಿ ಜೆಸಿಬಿ ಯಂತ್ರ ಕೆಲಸ ಮಾಡುವ ವೇಳೆ ಹಠಾತ್ ಜೋಡಿ ನಾಗರಹಾವು ಸಿಲುಕಿವೆ, ಜೆಸಿಬಿ ಯಂತ್ರದ ಚಾಲಕ ಮಣ್ಣನ್ನ ಹೊರಎತ್ತುವ ವೇಳೆ ಹಾವುಗಳನ್ನ ಕಂಡು ಯಂತ್ರದ ಕೆಲಸವನ್ನ ನಿಲ್ಲಿಸಿದ್ದಾರೆ ಆದರೆ ಮೊದಲೇ ಪೆಟ್ಟು ತಿಂದಿದ್ದ ನಾಗರ ಹಾವೊಂದು ಅಸುನೀಗಿದೆ, ಗಂಭೀರ ಗಾಯಗೊಂಡಿದ್ದ ಇನ್ನೊಂದು ಹಾವನ್ನ ಸ್ನೇಕ್ ಮಧು ಅವರು ರಕ್ಷಿಸಿ ಮರಳಿ ಕಾಡಿಗೆ ಬಿಟ್ಟಿದ್ದಾರೆ, ಸಾವೀಗೀಡಾದ ಹಾವನ್ನ ಶಾಸ್ತ್ರೋತ್ರ ಪೂಜೆ ನೆರವೇರಿಸಿ ಅಂತ್ಯ ಸಂಸ್ಕಾರ ಮಾಡಲಾಗಿದೆ.