ಚಾಮರಾಜನಗರ: ಸಿಎಎ ಜಾರಿ ವಿಚಾರ ಕುರಿತಂತೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಬಿಜೆಪಿಯವರು ಸಿಎಎಯನ್ನ ಚುನಾವಣೆಗಾಗಿ ಜಾರಿ ಮಾಡಿದ್ದಾರೆ, ಇಷ್ಟು ದಿನ ಯಾಕೆ ಮಾಡಿರಲಿಲ್ಲ. ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದಕ್ಕೆ ನಮ್ಮ ವಿರೋಧವಿದೆ ಎಂದರು.
ನಮ್ಮ ಸರ್ಕಾರ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಡ್ತಿದೆ ಎಂಬ ಆರ್.ಅಶೋಕ್ ಹೇಳಿಕೆ ಬಾಲಿಶವಾಗಿದೆ, ಅದೆಲ್ಲಾ ಅಪ್ಪಟ ಸುಳ್ಳು , ನಮಗೆ ನೀರಿಲ್ಲ ಇನ್ನು ತಮಿಳುನಾಡಿಗೆ ಬಿಡೋದೆಲ್ಲಿ , ನಾವು ಒಂದು ತೊಟ್ಟು ನೀರನ್ನು ಸಹ ಕೊಟ್ಟಿಲ್ಲ ಅವರು ಸಹ ಕೇಳಿಲ್ಲ , ಡ್ಯಾಮ್ ಈಗಾಗಲೇ ಬರಿದಾಗಿದೆ ಇಂತಹ ಸಂಧರ್ಭದಲ್ಲಿ ನೀರು ಬಿಡೋ ಮಾತೇ ಇಲ್ಲ ಎಂದರು.