ಚಾಮರಾಜನಗರ: ಪಟ್ಟಣದ ಊಟಿ ವೃತ್ತದ ಬಳಿ ಅಳವಡಿಸಲಾಗಿರುವ ಟ್ರಾಫಿಕ್ ಸಿಗ್ನಲ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ವಾಹನ ಸವಾರರು ಅಡ್ಡಾದಿಡ್ಡಿ ಚಾಲನೆ ಮಾಡುತ್ತಿದ್ದಾರೆ ಇದರಿಂದ ಶಾಲಾ ಮಕ್ಕಳಿಗೆ ವಯಸ್ಕರಿಗೆ ತುಂಬಾ ತೊಂದರೆಯಾಗಿದೆ ಅಂತ ಪಟ್ಟಣ ವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಗುಂಡ್ಲುಪೇಟೆಯು ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿಯನ್ನ ಹಂಚಿಕೊಂಡಿರುವುದರಿಂದ ಪ್ರತಿನಿತ್ಯ ಸಾವಿರಾರು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ, ಗುಂಡ್ಲುಪೇಟೆಯಿಂದ ಕೇರಳ ಮತ್ತು ತಮಿಳುನಾಡಿಗೆ ತರಕಾರಿ ಸೇರಿದಂತೆ ಇನ್ನಿತರ ಸರಕು ಸಾಗಣೆಯನ್ನ ಮಾಡಲಾಗ್ತಿದೆ ಆದ್ರೆ ಪಟ್ಟಣದ ಊಟಿ ವೃತ್ತದ ಬಳಿ ಇರುವ ಸುರಕ್ಷಿತ ಸಂಚಾರ ಸೂಚಕ ಚಾಲನೆಯಲ್ಲಿಲ್ಲದ ಕಾರಣ ವಾಹನ ಸವಾರರು ಅಡ್ಡಾದಿಡ್ಡಿ ಚಾಲನೆ ಮಾಡ್ತಾರೆ ಇದರಿಂದ ಅಪಘಾತಗಳಾಗುವ ಸಂಭವವಿದೆ ಮತ್ತು ಶಾಲಾ ಮಕ್ಕಳು ತೆರಳಲು ಕಷ್ಟಕರವಾಗಿದೆ ಎಂದು ಪಟ್ಟಣ ನಿವಾಸಿ ವಿಶ್ವಾಸ್ ಆತಂಕ ವ್ಯಕ್ತಪಡಿಸಿದ್ದು ಪೊಲೀಸ್ ಇಲಾಖೆ ಶೀಘ್ರದಲ್ಲೇ ಸಂಚಾರ ಸೂಚಕವನ್ನ ದೂರಸ್ತಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.