ಚಾಮರಾಜನಗರ: ಹೆಸರಿಗೆ ಮಾತ್ರ ಪ್ರಾಥಮಿಕ ಆರೋಗ್ಯ ಕೇಂದ್ರ, ಚಿಕಿತ್ಸೆ ಪಡೆಯೋಕೆ ಅಂತ ಬಂದ್ರೆ ಇಲ್ಲಿ ವೈದ್ಯರಾಗಲಿ ನರ್ಸ್ ಗಳಾಗಲಿ ಲಭ್ಯವಿರೋದಿಲ್ಲ ಸಂಜೆ 7 ಗಂಟೆಗೆ ಆಸ್ಪತ್ರೆ ಬಾಗಿಲಿಗೆ ಬೀಗ ಬಿದ್ದಿರುತ್ತೆ ಒಂದು ವೇಳೆ ತುರ್ತು ಚಿಕಿತ್ಸೆಗೆ ಈ ಆಸ್ಪತ್ರೆ ನಂಬಿ ಬಂದ್ರೆ ರೋಗಿಯನ್ನ ಆ ದೇವ್ರೇ ಕಾಪಾಡ್ಬೇಕು.
ಈ ದೃಶ್ಯ ಕಂಡುಬಂದಿದ್ದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24 ಗಂಟೆಯೂ ಹೆರಿಗೆ ಸೌಲಭ್ಯವಿದೆ ಅಂತ ಬೋರ್ಡ್ ಹಾಕಿಸಲಾಗಿದೆ ಆದ್ರೆ ರಾತ್ರಿ ಪಾಳಿಯದಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಅಲಭ್ಯತೆಯಿಂದ ಸ್ಥಳೀಯರು ಕೆಂಡಾಮಂಡಲರಾಗಿದ್ದಾರೆ.
ಬಡವರಿಗೆ , ಗ್ರಾಮಾಂತರ ಪ್ರದೇಶದ ಜನರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ ಸ್ಥಾಪನೆ ಮಾಡಲಾಗಿದೆ ಆದ್ರೆ ಕೂಡ್ಲೂರು ಗ್ರಾಮದಲ್ಲಿನ ಆರೋಗ್ಯ ಕೇಂದ್ರಕ್ಕೆ ಸಂಜೆ ವೇಳೆಗೆ ಬೀಗ ಜಡಿಯಲಾಗ್ತಿದೆ.
24 ಗಂಟೆ ಹೆರಿಗೆ ಸೌಲಭ್ಯ ಇದೆ ಎಂದು ಬೋರ್ಡ್ ಅಳವಡಿಸಿರೋ ಜಿಲ್ಲಾ ಆರೋಗ್ಯ ಇಲಾಖೆ ವೈದ್ಯರ ನಡೆಯನ್ನ ಪ್ರಶ್ನಿಸದೆ ಮೌನವಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ, ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಅಸ್ಪತ್ರೆಯ ಬಗ್ಗೆ ನಿರ್ಲಕ್ಷ್ಯತನ ತೋರುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದು ರಾತ್ರಿ ಪಾಳಿಯದಲ್ಲಿ ಕರ್ತವ್ಯ ನಿರ್ವಹಿಸದ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.