ಗುಂಡ್ಲುಪೇಟೆ: ದೇಶ ವಿಭಜನೆ ಹೇಳಿಕೆ ಮತ್ತು ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ಧವಾಗಿ ದೇಶ ಮೊದಲು ಎಂಬ ಅಭಿಯಾನದಡಿ ಗುಂಡ್ಲುಪೇಟೆ ಬಿಜೆಪಿ ಯುವ ಮೋರ್ಚಾ ವತಿಯಿಂದ ತಿರಂಗ ಯಾತ್ರೆಗೆ ಚಾಲನೆ ನೀಡಲಾಯಿತು.
ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ, ಆರೋಪಿಯನ್ನ ರಕ್ಷಣೆ ಮಾಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುತ್ತಿದೆ ಎಂದು ಗುಂಡ್ಲುಪೇಟೆ ಬಿಜೆಪಿ ಯುವ ಮೋರ್ಚಾ ಕಿಡಿಕಾರಿದೆ.
ಇಂದು ಗುಂಡ್ಲುಪೇಟೆಯ ಮಡಹಳ್ಳಿ ವೃತ್ತದಲ್ಲಿ ದೇಶ ಮೊದಲು ಎಂಬ ಅಭಿಯಾನದಡಿ ನಾಡಿನ ಸಂರಕ್ಷಣಾ ಹಿತದೃಷ್ಟಿಯಿಂದ ಕಾಲ್ನಡಿಗೆ ತಿರಂಗ ಯಾತ್ರೆಗೆ ಚಾಲನೆ ನೀಡಿ ರಾಜ್ಯ ಸರ್ಕಾರದ ವಿರುದ್ಧ ದ್ವಂದ್ವ ನೀತಿ ಆರೋಪ ಮಾಡಲಾಯಿತು.
ಯುವ ಮೋರ್ಚಾ ತಾಲೂಕು ಅಧ್ಯಕ್ಷ ವಿಜಯ್ ಮಾತನಾಡುತ್ತ ರಾಜ್ಯ ಸರ್ಕಾರದ ಘಟಾನುಘಟಿ ನಾಯಕರು ದೇಶ ವಿರೋಧಿಗಳ ಎಡೆಮುರಿ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಸದನದಲ್ಲಿ ಬಿ.ಕೆ.ಹರಿಪ್ರಸಾದ್ ಎಂಬ ಕಾಂಗ್ರೆಸ್ ನಾಯಕ ಪಾಕಿಸ್ತಾನವನ್ನ ನಮ್ಮ ಪಕ್ಕದ ರಾಷ್ಟ್ರ ಎಂದು ಅಪ್ಪಿಕೊ ಹೇಳಿಕೆ ನೀಡಿರೋದು ಖಂಡನೀಯ , ಎಫ್ ಎಸ್ ಎಲ್ ವರದಿ ಬಂದ್ಮೇಲು ಆರೋಪಿಯನ್ನು ರಕ್ಷಿಸುವತ್ತ ರಾಜ್ಯ ಸರ್ಕಾರ ಮುಂದಡಿಯಿಟ್ಟಿದೆ ಈ ಹಿನ್ನೆಲೆಯಲ್ಲಿ ಸರ್ಕಾರದ ನಡೆಯನ್ನ ಖಂಡಿಸಿ ದೇಶ ಮೊದಲು ಅಭಿಯಾನ ವನ್ನ ಕೈಗೊಂಡಿದ್ದೇವೆ ಎಂದರು.