News Karnataka Kannada
Monday, May 06 2024
ಚಾಮರಾಜನಗರ

ಚಾಮರಾಜನಗರ: ಮಹದೇಶ್ವರಬೆಟ್ಟದಲ್ಲಿ ಹೊಸ ವರ್ಷದ ದಿನವೇ ಪ್ರತಿಭಟನೆ

Protest on New Year's Day at Mahadeshwara Betta
Photo Credit : By Author

ಚಾಮರಾಜನಗರ: ಪವಾಡ ಪುರುಷ ನೆಲೆಸಿರುವ ಧಾರ್ಮಿಕ ಕ್ಷೇತ್ರದಲ್ಲಿ ಹೊಸ ವರ್ಷದ ಆಚರಣೆಗೆ ಸಾವಿರಾರು ಮಂದಿ ಜಮಾಯಿಸಿದ್ದು,ಈ ಬಾರಿಯ ಹೊಸ ವರ್ಷದ ಮೊದಲನೇ ದಿನವೇ ಅಲ್ಲಿ ವಾಸ ಮಾಡುವ ಜನರು ಪ್ರಾಧಿಕಾರದ ಕಿರುಕುಳ ತಾಳಲಾರದೆ ಪ್ರತಿಭಟನೆ ನಡೆಸಿದ್ದಾರೆ.

ಪ್ರವಾಡ ಪುರುಷ ನೆಲೆಸಿರುವ ಅಂತರರಾಜ್ಯ ಗಡಿ ಚಾಮರಾಜನಗರ ಜಿಲ್ಲೆಯ ಮಲೆ‌ಮಹದೇಶ್ವರ ಬೆಟ್ಟದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಸಾವಿರಾರು ಭಕ್ತರು ಆಗಮಿಸಿದ್ದರೆ, ಮತ್ತೊಂದು ಕಡೆ ದೇವಾಲಯ ಪ್ರಾಧಿಕಾರದ ಕಿರುಕುಳ ತಾಳಲಾರದೆ ಇಲ್ಲಿನ‌ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ಮಲೆ‌ಮಹದೇಶ್ವರ ಬೆಟ್ಟದ ದೀಪದ ಒಡ್ಡು ನಲ್ಲಿ 108 ಅಡಿ ಎತ್ತರದ ಬೃಹತ್ ಮಹದೇಶ್ವರ ವಿಗ್ರಹ ನಿರ್ಮಾಣವಾಗುತ್ತಿದೆ. ಪ್ರತಿಮೆ ಲೋಕಾರ್ಪಣೆ ಮಾಡುವ ಸಲುವಾಗಿ ಶ್ರೀ ಮಲೆ‌ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಅಲ್ಲಿನ‌ ಜನರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು, ಹಾಗೂ ಬೃಹತ್ ಪ್ರತಿಮೆ ಲೋಕಾರ್ಪಣೆ ಮಾಡುವ ಸಲುವಾಗಿ ರಸ್ತೆ ಉದ್ಯಾನವನ ನಿರ್ಮಾಣಕ್ಕೆ ರಾತ್ರೋ ರಾತ್ರಿ ಜೆಸಿಬಿ ಬಳಸಿಕೊಂಡು ಕಾಮಗಾರಿ ನಡೆಸಿದೆ.

ದೇವಾಲಯ ಪ್ರಾಧಿಕಾರದ ವರ್ತನೆಯಿಂದ ಬೇಸತ್ತ ಸಾರ್ವಜನಿಕರು ರೈತರ ನೆರವಿನೊಂದಿಗೆ ಹೊಸ ವರ್ಷದ ಮೊದಲೇ ದಿನವೇ ಪ್ರಾಧಿಕಾರಸ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗಿಳಿದರು. ಮಹಿಳೆಯರು ಮತ್ತು ನಿವಾಸಿಗಳಿಗೆ ಪ್ರಾಧಿಕಾರದಿಂದ ಬೆದರಿಕೆ ಹಾಕಲಾಗುತ್ತಿದೆ. ಪ್ರಾಧಿಕಾರದ ಕೆಲಸಕ್ಕೆ ನೆರವಾದವರಿಗೆ ಅನ್ಯಾಯ ಮಾಡಲಾಗುತ್ತಿದೆ ಪ್ರಾಧಿಕಾರದ ವಿರುದ್ದ ಹೋರಾಟ ನಡೆಸಿದರೆ ಸಿಗುವ ಪರಿಹಾರ ಸಿಗೋದಿಲ್ಲ ಅಂತ ಬೆದರಿಕೆ ಹಾಕ್ತಾ ಇದ್ದಾರೆ ಎಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಮಲೆ‌ಮಹದೇಶ್ವರ ಬೆಟ್ಟ ಪ್ರಾಧಿಕಾರವು ಅಭಿವೃದ್ಧಿ ನೆಪಮಾಡಿಕೊಂಡು ಅಲ್ಲಿನ‌ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಮಾಡುವ ತಂತ್ರ ಇದಾಗಿದೆ ಎನ್ನಲಾಗುತ್ತಿದೆ ಈ ಬಗ್ಗೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸಾರ್ವಜನಿಕರ‌ ನೆರವಿಗೆ ಬರಬೇಕಾಗಿದೆ ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು