ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಬಂಡೀಪುರ ವ್ಯಾಪ್ತಿಯಲ್ಲಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಲ್ಲಿನ ಗೋಪಾಲಪುರ ಸಮೀಪದ ತೋಟದಲ್ಲಿ ಹಸುವನ್ನು ಕೊಂದು, ಇಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಹಸಿದ ಹೆಬ್ಬುಲಿಯನ್ನು ಸಾಕಾನೆ ಅಭಿಮನ್ಯು ಸಹಾಯದಿಂದ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಕಾಡಂಚಿನ ಗ್ರಾಮಗಳಲ್ಲಿ ನಿತ್ಯವೂ ತೊಂದರೆ ನೀಡುವ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು ಶನಿವಾರ ಹಸುವೊಂದನ್ನು ಕೊಂದು ತೋಟದಲ್ಲಿದ್ದ ರೈತನ ಮೇಲೆ ದಾಳಿ ನಡೆಸಿ ಗಾಯಗೊಳಿಸದ್ದ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಸೆರೆಹಿಡಿದಿದ್ದಾರೆ.
ಕೊಡಗಿನ ದುಬಾರೆಯಿಂದ ಅಭಿಮನ್ಯು ಮತ್ತು ಶ್ರೀಕಾಂತ ಸಾಕಾನೆಯನ್ನು ಕರೆಸಿಕೊಂಡು ಭಾನುವಾರ ಬೆಳಗ್ಗೆ 6 ಗಂಟೆಯಿಂದ 9ಗಂಟೆಯ ತನಕ ಹುಲಿಗಾಗಿ ಹುಡುಕಾಟ ನಡೆಸಿದ ಬಳಿಕ ಅಡಗಿದ್ದ ಹುಲಿ ಕಾಣಿಸಿಕೊಂಡ ಕೂಡಲೇ ಅರವಳಿಕೆ ಚುಚ್ಚುಮದ್ದನ್ನು ಹಾರಿಸಿ ಹುಲಿ ನಿತ್ರಾಣಗೊಳ್ಳುತ್ತಿದ್ದಂತೆ ಬಲೆ ಹಾಕಿ ಸೆರೆ ಹಿಡಿದು ವಾಹನದಲ್ಲಿ ಮೈಸೂರಿನ ಕೂರ್ಗಳ್ಳಿಯಲ್ಲಿರುವ ರಿಸ್ಕ್ಯೂ ಸೆಂಟರ್ಗೆ ಸಾಗಿಸಲಾಯಿತು.