News Karnataka Kannada
Sunday, May 12 2024
ಚಾಮರಾಜನಗರ

ಚಾಮರಾಜನಗರ: ರೈತರ ನಿದ್ದೆ ಗೆಡಿಸಿದ್ದ ಹುಲಿ ಸೆರೆಹಿಡಿದ ಅರಣ್ಯ ಸಿಬ್ಬಂದಿ

Forest officials capture tiger for disturbing farmers' sleep
Photo Credit : By Author

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಬಂಡೀಪುರ ವ್ಯಾಪ್ತಿಯಲ್ಲಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಲ್ಲಿನ ಗೋಪಾಲಪುರ ಸಮೀಪದ ತೋಟದಲ್ಲಿ ಹಸುವನ್ನು ಕೊಂದು, ಇಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಹಸಿದ ಹೆಬ್ಬುಲಿಯನ್ನು ಸಾಕಾನೆ ಅಭಿಮನ್ಯು ಸಹಾಯದಿಂದ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಕಾಡಂಚಿನ ಗ್ರಾಮಗಳಲ್ಲಿ ನಿತ್ಯವೂ ತೊಂದರೆ ನೀಡುವ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು ಶನಿವಾರ ಹಸುವೊಂದನ್ನು ಕೊಂದು ತೋಟದಲ್ಲಿದ್ದ ರೈತನ ಮೇಲೆ ದಾಳಿ ನಡೆಸಿ ಗಾಯಗೊಳಿಸದ್ದ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಸೆರೆಹಿಡಿದಿದ್ದಾರೆ.

ಕೊಡಗಿನ ದುಬಾರೆಯಿಂದ ಅಭಿಮನ್ಯು ಮತ್ತು ಶ್ರೀಕಾಂತ ಸಾಕಾನೆಯನ್ನು ಕರೆಸಿಕೊಂಡು ಭಾನುವಾರ ಬೆಳಗ್ಗೆ 6 ಗಂಟೆಯಿಂದ 9ಗಂಟೆಯ ತನಕ ಹುಲಿಗಾಗಿ ಹುಡುಕಾಟ ನಡೆಸಿದ ಬಳಿಕ ಅಡಗಿದ್ದ ಹುಲಿ ಕಾಣಿಸಿಕೊಂಡ ಕೂಡಲೇ ಅರವಳಿಕೆ ಚುಚ್ಚುಮದ್ದನ್ನು ಹಾರಿಸಿ ಹುಲಿ ನಿತ್ರಾಣಗೊಳ್ಳುತ್ತಿದ್ದಂತೆ ಬಲೆ ಹಾಕಿ ಸೆರೆ ಹಿಡಿದು ವಾಹನದಲ್ಲಿ ಮೈಸೂರಿನ ಕೂರ್ಗಳ್ಳಿಯಲ್ಲಿರುವ ರಿಸ್ಕ್ಯೂ ಸೆಂಟರ್‌ಗೆ ಸಾಗಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು