News Karnataka Kannada
Sunday, May 05 2024
ಚಾಮರಾಜನಗರ

ಬೂದಿತಿಟ್ಟು:  ಗಿರಿಜನ ವ್ಯಕ್ತಿ ಮೇಲೆ ಕರಡಿ ದಾಳಿ

Beer
Photo Credit : By Author

ಬೂದಿತಿಟ್ಟು: ಬಹಿರ್ದೆಸೆಗೆ ತೆರಳಿದ್ದ ಗಿರಿಜನ ವ್ಯಕ್ತಿ ಮೇಲೆ ಕರಡಿ ದಾಳಿ ನಡೆಸಿ ಮಾರಣಾಂತಿಕವಾಗಿ ಗಾಯಗೊಳಿಸಿದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ವಲಯ ವ್ಯಾಪ್ತಿಯ  ಲಿಂಗಪುರದಲ್ಲಿ ನಡೆದಿದೆ.

ಗಿರಿಜನ ಹಾಡಿಯ ರಾಮಚಂದ್ರ ಕರಡಿ ದಾಳಿಗೆ ಸಿಲುಕಿದವರು. ಇವರು ಎಂದಿನಂತೆ ಸೋಮವಾರ ಬೆಳಿಗ್ಗೆ ಹಾಡಿಯ ಸಮೀಪವಿರುವ ಅರಣ್ಯದಂಚಿಗೆ ಬಹಿರ್ದೆಸೆಗೆ ತೆರಳಿದ್ದಾರೆ. ಈ ವೇಳೆ ಕರಡಿ ಅವರ ಮೇಲೆ ದಾಳಿ  ನಡೆಸಿ ತೀವ್ರ ಗಾಯಗೊಳಿಸಿದೆ.

ಕರಡಿ ದಾಳಿಯಿಂದ ಹೆದರಿದ್ದಲ್ಲದೆ ರಕ್ಷಣೆಗಾಗಿ ಕೂಗಿ ಕೊಂಡಿದ್ದಾರೆ. ತಕ್ಷಣ ಸಮೀಪದಲ್ಲಿದ್ದ ಹಾಡಿಯ ಜನತೆ ಅವರ ಬಳಿಗೆ ಓಡಿ ಬಂದಿದ್ದಾರೆ.

ಈ  ವೇಳೆ ಕರಡಿ ಅವರನ್ನು ಅಲ್ಲಿಯೇ ಬಿಟ್ಟು ಕಾಡಿನತ್ತ ಓಡಿ ಹೋಗಿದೆ. ಗಾಯಗೊಂಡ ರಾಮಚಂದ್ರನನ್ನುತಕ್ಷಣ ಆಂಬುಲೆನ್ಸ್ ನಲ್ಲಿ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿಹೆಚ್ಚಿನ ಚಿಕಿತ್ಸೆಗಾಗಿ  ಮೈಸೂರಿನ  ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು