News Karnataka Kannada
Friday, May 03 2024
ಚಾಮರಾಜನಗರ

ಕೊಳ್ಳೇಗಾಲದಲ್ಲಿ ಶ್ರೀ ಕೃಷ್ಣ ‌ಜನ್ಮಾಷ್ಟಮಿ‌ ಆಚರಣೆ

Sri Krishna Janmashtami celebrations in Kollegal
Photo Credit :

ಕೊಳ್ಳೆಗಾಲ: ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ‌ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ‌ರಕ್ಷಾಬಂಧನ ಹಾಗೂ ಶ್ರೀ ಕೃಷ್ಣ ‌ಜನ್ಮಾಷ್ಟಮಿ‌ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಡಿವೈಎಸ್ಪಿ ‌ಕೃಷ್ಣ ಮೂರ್ತಿ ಅವರು ಅಧಿಕಾರಿಗಳು‌ ಸತ್ಯ ‌ಪ್ರಾಮಾಣಿಕತೆಯಿಂದ ನಡೆದರೆ ಆಡಳಿತ ಯಂತ್ರ‌ ಸುಸೂತ್ರವಾಗಿ ನಡೆಯುತ್ತದೆ. ನೆನಪು ಮತ್ತು ಸೇವೆ ಸಮತೋಲನೆ ಇದ್ದಾಗ ಕಾರ್ಯಶೀಲತೆ ಹೆಚ್ಚುತ್ತದೆ ಹಾಗೂ ಸರ್ವರಿಂದ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎಂದರು.

ಸಂಸ್ಥೆಯ ಜಿಲ್ಲಾ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಪ್ರಭಾಣೀಜಿ, ಮಾತನಾಡಿ ರಕ್ಷಾಬಂಧನವು ಭಾರತೀಯ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪ್ರಕಟ ಮಾಡುವ, ಆಧ್ಯಾತ್ಮಿಕ ಮೌಲ್ಯಗಳನ್ನು‌ ಎಲ್ಲೆಡೆ ಸಾರುವ ಅದ್ಬುತವಾದ ‌ಹಬ್ಭ ಅಷ್ಟೇ ಅಲ್ಲ ಶ್ರೀ ರಕ್ಷೆಯು‌ ಪರಮಾತ್ಮನು ನಮ್ಮೆಲ್ಲರಿಗೂ‌  ನೀಡಿರುವ‌‌ ಅಮೂಲ್ಯ ಕೊಡುಗೆ ಎಂದು ಹೇಳಿದರು.

ಇದೇ ವೇಳೆ ಎಲ್ಲರಿಗೂ ಶ್ರೀ ರಕ್ಷೆಯನ್ನು ಕಟ್ಟಿ‌ ಸಿಹಿಯನ್ನು ಹಂಚಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆಯ ಪ್ರಭಾರ ಅಧ್ಯಕ್ಷೆ ಸುಶೀಲ ಶಂಕರನಾರಾಯಣ, ಆಯುಕ್ತರಾದ ನಂಜುಂಡಸ್ವಾಮಿ, ರಾಜಯೋಗಿನಿ ಬ್ರಹ್ಮಕುಮಾರಿ ವೀಣಾಜೀ, ಓಂಶಾಂತಿ ನ್ಯೂಸ್ ಸರ್ವೀಸ್ ನ ಬಿ.ಕೆ.ಆರಾಧ್ಯ, ‌ಸಂತೋಷ್, ಬಿಂದು, ಉಮಾ ಹಾಜರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು