ಕೊಳ್ಳೆಗಾಲ: ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಕ್ಷಾಬಂಧನ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಡಿವೈಎಸ್ಪಿ ಕೃಷ್ಣ ಮೂರ್ತಿ ಅವರು ಅಧಿಕಾರಿಗಳು ಸತ್ಯ ಪ್ರಾಮಾಣಿಕತೆಯಿಂದ ನಡೆದರೆ ಆಡಳಿತ ಯಂತ್ರ ಸುಸೂತ್ರವಾಗಿ ನಡೆಯುತ್ತದೆ. ನೆನಪು ಮತ್ತು ಸೇವೆ ಸಮತೋಲನೆ ಇದ್ದಾಗ ಕಾರ್ಯಶೀಲತೆ ಹೆಚ್ಚುತ್ತದೆ ಹಾಗೂ ಸರ್ವರಿಂದ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎಂದರು.
ಸಂಸ್ಥೆಯ ಜಿಲ್ಲಾ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಪ್ರಭಾಣೀಜಿ, ಮಾತನಾಡಿ ರಕ್ಷಾಬಂಧನವು ಭಾರತೀಯ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪ್ರಕಟ ಮಾಡುವ, ಆಧ್ಯಾತ್ಮಿಕ ಮೌಲ್ಯಗಳನ್ನು ಎಲ್ಲೆಡೆ ಸಾರುವ ಅದ್ಬುತವಾದ ಹಬ್ಭ ಅಷ್ಟೇ ಅಲ್ಲ ಶ್ರೀ ರಕ್ಷೆಯು ಪರಮಾತ್ಮನು ನಮ್ಮೆಲ್ಲರಿಗೂ ನೀಡಿರುವ ಅಮೂಲ್ಯ ಕೊಡುಗೆ ಎಂದು ಹೇಳಿದರು.
ಇದೇ ವೇಳೆ ಎಲ್ಲರಿಗೂ ಶ್ರೀ ರಕ್ಷೆಯನ್ನು ಕಟ್ಟಿ ಸಿಹಿಯನ್ನು ಹಂಚಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆಯ ಪ್ರಭಾರ ಅಧ್ಯಕ್ಷೆ ಸುಶೀಲ ಶಂಕರನಾರಾಯಣ, ಆಯುಕ್ತರಾದ ನಂಜುಂಡಸ್ವಾಮಿ, ರಾಜಯೋಗಿನಿ ಬ್ರಹ್ಮಕುಮಾರಿ ವೀಣಾಜೀ, ಓಂಶಾಂತಿ ನ್ಯೂಸ್ ಸರ್ವೀಸ್ ನ ಬಿ.ಕೆ.ಆರಾಧ್ಯ, ಸಂತೋಷ್, ಬಿಂದು, ಉಮಾ ಹಾಜರಿದ್ದರು.