News Karnataka Kannada
Friday, May 03 2024
ಚಾಮರಾಜನಗರ

ಸಾಲಭಾಧೆಗೆ ಹೆದರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವನ ಶವ ಪತ್ತೆ

Suicide
Photo Credit :

ಚಾಮರಾಜನಗರ: ಸಾಲಭಾಧೆಗೆ ಹೆದರಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದ ಯುವಕನ ಶವನ ಮಂಗಳವಾರ ಕೆರೆಯಲ್ಲಿ ಪತ್ತೆಯಾಗಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಕಟ್ಟೆ ಕೆರೆಯಲ್ಲಿ ಬೆಟ್ಟಹಳ್ಳಿ ಗ್ರಾಮದ ವಿಜಯ್ ಸಾಲಭಾಧೆ ತಾಳಲಾರದೆ ಸೋಮವಾರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನು.

ಸೋಮವಾರದಿಂದ ಅಗ್ನಿ ಶಾಮಕದಳದವರು ಶವ ಪತ್ತೆಗಾಗಿ ಪ್ರಯತ್ನಿಸಿದ್ದರು, ಶವ ಸಿಕ್ಕಿರಲಿಲ್ಲ ಮಂಗಳವಾರ ಬೆಳಗ್ಗೆ ಕಲ್ಕಟ್ಟೆ ಕೆರೆಯಲ್ಲಿ ವಿಜಯ್ ಶವ ದೊರೆತಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವಿಜಯ್ ಗೆ 25 ಲಕ್ಷ ರೂಪಾಯಿಗಳ ಸಾಲ ಇತ್ತೆಂದು ಹೇಳಲಾಗಿದ್ದು, ಈ ಬಗ್ಗೆ ಸಾಲಗಾರರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ಬಳಲಿಹೋಗಿದ್ದ ವಿಜಯ್ ಸಾಲ ತೀರಿಸಲಾಗದೆ ಸಾವಿನ ಹಾದಿ ಹಿಡಿದರು ಎನ್ನಲಾಗುತ್ತಿದೆ.

ತನ್ನ ಸಾವಿಗೆ ತಾನೇ ಹೊಣೆ ಎಂದು ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಪೋಸ್ಟ್ ಮಾಡಿಕೊಂಡಿರುವ ವಿಜಯ್ ಯಾರ ಬಳಿ ಎಷ್ಟು ಪ್ರಮಾಣದ ಸಾಲ ಮಾಡಿದ್ದ ಎಂದು ತಿಳಿದು ಬಂದಿಲ್ಲವಾದರೂ ಸಾಲದ ಭೂತಕ್ಕೆ ಯುವಕನ ಪ್ರಾಣವಂತು ಬಲಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು