ಚಾಮರಾಜನಗರ: ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿ ಪಕ್ಕದ ದಿಂಬಂ ಬೆಟ್ಟದ ಕೊಂಡೈ ಉಚ್ಚಿ ತಿರುವಿನಲ್ಲಿ ಕಂಟೈನರ್ ಲಾರಿ ಕೆಟ್ಟು ನಿಂತಿದ್ದರಿಂದ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ನಾಲ್ಕು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಂತರ ಕ್ರೇನ್ ಕರೆಸಿ ಕಂಟೈನರ್ ಲಾರಿಯನ್ನು ಹೊರತೆಗೆದು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಚಾಮರಾಜನಗರ ಜಿಲ್ಲೆಯಸಮೀಪದ ದಿಂಬಂ ನ 27 ಅಂಕುಡೊಂಕಾದ ತಿರುವುಗಳಿರುವ ದಟ್ಟ ಅರಣ್ಯವಾಗಿದೆ. ಸತ್ಯಮಂಗಲ-ಮೈಸೂರು ರಾಷ್ಟ್ರೀಯ ಹೆದ್ದಾರಿ ತಿಮ್ಮಪ್ಪನ ಬೆಟ್ಟದ ಹಾದಿಯಲ್ಲಿ ಹಾದು ಹೋಗುತ್ತದೆ. ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.
ಈ ಹಂತದಲ್ಲಿ ಕೊಯಮತ್ತೂರಿನಿಂದ ಭಾರೀ ಭಾರ ಹೊತ್ತ ಕಂಟೈನರ್ ಲಾರಿಯೊಂದು ದಿಂಬಂ ಘಾಟ್ ಮೂಲಕ ಬೆಂಗಳೂರು ಕಡೆಗೆ ತೆರಳುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು. ಇದರಿಂದ ಮಂಗಳವಾರ ಬೆಳಗ್ಗೆಯಿಂದ ಸುಮಾರು ನಾಲ್ಕು ಗಂಟೆಗೂ ಹೆಚ್ಚು ಕಾಲ ಯಾವುದೇ ವಾಹನಗಳು ಸಂಚರಿಸಲಾಗದೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ಬಳಿಕ ಕ್ರೇನ್ ಕರೆಯಿಸಿ ಕಂಟೈನರ್ ಲಾರಿಯನ್ನು ಬದಿಗೆ ಹಾಕುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.