News Karnataka Kannada
Sunday, May 12 2024
ಚಾಮರಾಜನಗರ

ಗುಂಡ್ಲುಪೇಟೆಯಲ್ಲಿ ರೈತರಿಂದ ಹಣ ಕೀಳುತ್ತಿರುವ ಅಧಿಕಾರಿ!

Chamaraj Nagar
Photo Credit :

ಚಾಮರಾಜನಗರ: ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎಂಬುದು ಹಿಂದಿನಿಂದಲೂ ಪ್ರಚಲಿತದಲ್ಲಿರುವ ಮಾತಾಗಿದೆ. ಅದೇ ರೀತಿ ಸರ್ಕಾರ ಬಡವರ ಅಭಿವೃದ್ಧಿಗೆ ಹತ್ತಾರು ಯೋಜನೆ ಜಾರಿಗೆ ತಂದರೂ ಅದು ಅವರಿಗೆ ತಲುಪಬೇಕಾದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಲಂಚ ನೀಡುವುದು ಅನಿವಾರ್ಯವಾಗಿದೆ.

ಇದಕ್ಕೆ ನಿದರ್ಶನ ಎನ್ನುವಂತೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರೊಬ್ಬರು ತಲಾ 2 ಸಾವಿರ ಹಣ ವಸೂಲಿ ಮಾಡಿರುವ ಆರೋಪ ಕೇಳಿಬಂದಿದ್ದು ಸ್ವತಃ ಫಲಾನುಭವಿಗಳೇ ಹಣ ಕೊಡ್ಬೇಕು ಅಂಥ ಮಾತನಾಡಿರೋ ವಿಡಿಯೋ ವೈರಲ್ ಆಗಿದೆ.

ಕಳೆದ ವಾರವಷ್ಟೇ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಅವರು ಅರ್ಹ 35 ಫಲಾನುಭವಿಗಳಿಗೆ ಪಂಪ್ ಸೆಟ್ ಪರಿಕರಗಳನ್ನ ವಿತರಿಸಿ ತೆರಳಿದ ಬಳಿಕ ಇತ್ತ ಅಧಿಕಾರಿ ತಮ್ಮ ಕೈಚೆಳಕ ಶುರು ಮಾಡಿದ್ದು ಅದಕ್ಕೆ ಸಾಕ್ಷಿಯಾಗಿ ಫಲಾನುಭವಿ ರೈತನಿಂದ ಹಣ ಪಡೆದುಕೊಳ್ಳುತ್ತಿರುವ ದೃಶ್ಯವೂ ಬಯಲಾಗಿದೆ.

ವರ್ಷಾನುಗಟ್ಟಲೆ ಬೋರ್ ವೆಲ್ ಕೊರೆಯಿಸಿ ಪರಿಕರಗಳಿಲ್ಲದೆ ಕಾದು ಕುಳಿತ್ತಿದ್ದ ರೈತನಿಗೆ ಸರ್ಕಾರ ಸೌಲಭ್ಯ ಒದಗಿಸಿದರೂ ಅದನ್ನು ಪಡೆಯಬೇಕಾದರೆ ಕಮೀಷನ್ ರೂಪದಲ್ಲಿ ರೈತರು ಹಣ ನೀಡಬೇಕಾಗಿರುವುದು ಬೇಸರದ ಸಂಗತಿಯಾಗಿದೆ. ಈಗಾಗಲೇ ಸಂಕಷ್ಟದಲ್ಲಿರುವ ರೈತರು ಪಂಪ್ ಸೆಟ್ ಗೆ ಬೇಕಾದ ಪರಿಕರಗಳನ್ನು ಪಡೆಯಲ  2 ಸಾವಿರ ಹಣವನ್ನ ಸಾಲ ಮಾಡಿ ತಂದುಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು