News Karnataka Kannada
Sunday, May 12 2024
ಚಾಮರಾಜನಗರ

ಶಿವನಸಮುದ್ರದ ಬಳಿ ವ್ಯಕ್ತಿಯ ಹತ್ಯೆಗೈದಿದ್ದ ಐವರು ಆರೋಪಿಗಳ ಬಂಧನ

Untitled 2 Recovered Recovered Recovered
Photo Credit :

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಶಿವನ ಸಮುದ್ರದ ಬಳಿಯ ದರ್ಗಾ ಬಳಿ ನಡೆದಿದ್ದ ವ್ಯಕ್ತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪೊಲೀಸರು ಐವರು ಹಂತಕರನ್ನು ಬಂಧಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರ ಬಳಿಯ ದರ್ಗಾದ ಸಮೀಪ ರಾಮನಗರ ನಿವಾಸಿ ರಾಮನಗರದ  ಮುಜಾಹಿದ್ ಅಲಿಯಾಸ್ ಬಾಬಾ ನ ಕೊಲೆಯಾಗಿತ್ತು. ಕೊಲೆಯಾದ ಮುಜಾಹಿದ್ ಅಲಿಯಾಸ್ ಬಾಬಾ ಸೈಯದ್ ಸಿಖಂದರ್ ಪತ್ನಿಯೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದನ್ನುಇದನ್ನುತಿಳಿದ ಸೈಯದ್ ಸಿಕಂದರ್ ಮುಜಾಹಿದ್ ಅಲಿಯಾಸ್ ಬಾಬಾನ್ನು ಸ್ನೇಹಿತರಾದ ಮುಸವ್ವೀರ್ ಅಲಿಯಾಸ್ ಮುಸ್ಸ, ಶೌಕತ್ ಪಾಶ, ಹಬೀಬ್ ಅಲಿಯಾಸ್ ಹಬ್ಬಿ, ಸೈಯದ್ ಸಲೀಂ ಅವರ ಸಹಕಾರದಿಂದ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಪೂರ್ವಯೋಜಿತದಂತೆ ಸೈಯದ್ ಸಿಕಂದರ್ ಮೇ 31 ರಂದು ತನ್ನ ಸ್ನೇಹಿತರೊಂದಿಗೆ ಶಿವನಸಮುದ್ರ ಬಳಿಯ ದರ್ಗಾದ ಬಳಿ ಮುಜಾಹಿದ್ ಅಲಿಯಾಸ್ ಬಾಬಾನನ್ನು ಪೂಜೆ ಮಾಡಿಸುವ ನೆಪದಲ್ಲಿ ಕರೆತಂದ ಸಿಕಂದರ್ ಬಳಿಕ ಸಮಯ ಸಾಧಿಸಿ ಮುಜಾಹಿದ್ ಅಲಿಯಾಸ್ ಬಾಬಾನ ತಲೆಯ ಮೇಲೆ ಕಲ್ಲು ಹಾಕಿ ಕೊಲೆಗೈದು ಪರಾರಿಯಾಗಿದ್ದರು.

ಈ ಸಂಬಂಧ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ ಶಿವಕುಮಾರ್ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡು ರಾಮನಗರದ ಸೈಯದ್ ಸಿಕಂದರ್, ಮುಸವ್ವೀರ್ ಅಲಿಯಾಸ್ ಮುಸ್ಸ, ಶೌಕತ್ ಪಾಶ, ಹಬೀಬ್ ಅಲಿಯಾಸ್ ಹಬ್ಬಿ, ಸೈಯದ್ ಸಲೀಂ ರವರುಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹತ್ಯೆ ಮಾಡಿರುವ ಬಗ್ಗೆ ಸತ್ಯಾಂಶ ಹೊರ ಬಂದಿದೆ.

ಕೊಲೆ ಪ್ರಕರಣ ಬೇಧಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಶಿವರಾಜ್ ಮುಧೋಳ್ ನೇತೃತ್ವದ ಸಬ್ ಇನ್ಸ್ ಪೆಕ್ಟರ್ ಗಳಾದ ಆರ್.ಮಂಜುನಾಥ್, ವೀರಣ್ಣಾರಾಧ್ಯ, ಚೇತನ್, ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರ್  ವಸಿಷ್ಠ, ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ಎಸ್ಪಿ ಚೇತನ್ ಶ್ಲಾಘಿಸಿ ನಗದು ಬಹುಮಾನ ಘೋಷಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು