News Karnataka Kannada
Sunday, April 28 2024
ಚಾಮರಾಜನಗರ

ತಾಯಿ-ಮಗಳ ಹತ್ಯೆಗೈಯ್ಯಲೆತ್ನಿಸಿದ್ದ ವ್ಯಕ್ತಿಯ ಬಂಧನ

Chamaraj
Photo Credit :

ಚಾಮರಾಜನಗರ: ಮನೆಯಲ್ಲಿದ್ದ ತಾಯಿ ಮಗಳನ್ನು ಹತ್ಯೆಗೈಯ್ಯಲೆತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರ ನಿವಾಸಿ ಗ್ರಾ.ಪಂ ಮಾಜಿ ಸದಸ್ಯ ನಟರಾಜು ಬಂಧಿತನಾಗಿದ್ದು, ಈತ ಅದೇ ಗ್ರಾಮದ  ತಾಯಿ ಮತ್ತು ಮಗಳ ಮೇಲೆ ಹಲ್ಲೆ ನಡೆಸಿ ಹತೈಗೆತ್ನಿಸಿದವನಾಗಿದ್ದಾನೆ.

ತಾಯಿಮಗಳು ಜನವರಿ 7 ರಂದು ರಾತ್ರಿ 10 ಗಂಟೆ ಸಮಯದಲ್ಲಿ ಮನೆಯಲ್ಲಿದ್ದಾಗ ನಟರಾಜು ಕೈಯಲ್ಲಿ ಮಚ್ಚುಹಿಡಿದುಕೊಂಡು ಮನೆಗೆ ನುಗ್ಗಿ ಕೊಲೆ ಮಾಡಲು ಯತ್ನಿಸಿದ್ದಲದ್ದೇ ತಲೆ ಕೂದಲನ್ನು ಹಿಡಿದು ಎಳೆದಾಡಿ ಅವಾಚ್ಯ ಶಬ್ದದಿಂದ ಬೈದಿದ್ದಾನೆ. ಅಲ್ಲದೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಈ ಸಂಬಂಧ ತಾಯಿ ಮಗಳು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಹಾಗೂ ಮುಖ್ಯಪೇದೆ ನಾಗರಾಜು, ಮಲ್ಲಿಕಾರ್ಜುನ, ಪೇದೆಗಳಾದ ವೆಂಕಟೇಶ್, ವೀರೇಂದ್ರ, ದಿನೇಶ್ ಅವರು ಆರೋಪಿ ನಟರಾಜುವನ್ನು  ಬಂಧಿಸಿದ್ದು,  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು