News Karnataka Kannada
Sunday, May 05 2024
ಚಾಮರಾಜನಗರ

ಬೇಬಿ ಬೆಟ್ಟದಲ್ಲಿ ಅದ್ಧೂರಿ ರಥೋತ್ಸವ

Jathre
Photo Credit : News Kannada

ಪಾಂಡವಪುರ: ತಾಲೂಕಿನ ಬೇಬಿ ಬೆಟ್ಟದ ಐತಿಹಾಸಿಕ ದನಗಳ ಜಾತ್ರೆಯ 7ನೇ ದಿನವಾದ ಸೋಮವಾರ  ಬೆಟ್ಟದ  ದೇವತೆಗಳಾದ ಮಾದೇಶ್ವರ   ಮತ್ತು  ಸಿದ್ದೇಶ್ವರರ ರಥೋತ್ಸವ ಕಾರ್ಯಕ್ರಮ ನಡೆಯಿತು.

ಚಂದ್ರವನ ಆಶ್ರಮದ ಪೀಠಾಧ್ಯಕ್ಷ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹಾಗೂ ರಾಮಯೋಗೀಶ್ವರ ಮಠದ                  ಶ್ರೀ ಶಿವಬಸವ ಸ್ವಾಮೀಜಿಗಳು ರಥದ ಹಗ್ಗ ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಇದಕ್ಕೂ ಮೊದಲು ರಥೋತ್ಸವದ ಉತ್ಸವ ಮೂರ್ತಿಗಳಿಗೆ ಇಬ್ಬರು ಸ್ವಾಮೀಜಿಗಳು ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.  ನಂತರ ಮಾದೇಶ್ವರ ದೇವಸ್ಥಾನ ಮುಂಭಾಗದಿಂದ ಹೊರಟ ರಥವನ್ನು ಭಕ್ತಾಧಿಗಳು ದೇವರ ಸ್ಮರಣೆ ಮಾಡಿ ಜೈಕಾರ ಹಾಕುತ್ತಾ ದೇವಸ್ಥಾನವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿಸಿದರು. ನಂತರ ರಥವು ಸ್ವಸ್ಥಾನಕ್ಕೆ ಮರಳಿತು.

ಈ ವೇಳೆ ಹಾಲು ಮಲೆ, ಜೇನು ಮಲೆ, ಎಪ್ಪತೇಳು ಮಲೆಯಲ್ಲಿ ತಪ್ಪದೇ ನಲಿದು ನರ್ತನ ಮಾಡುವ ಮಾದೇಶ್ವರನಿಗೆ ಉಘೇ ಉಘೇ ಎಂಬ ಭಕ್ತಿಪೂರ್ವಕ ಘೋಷಣೆಗಳು ಭಕ್ತ ಸಮೂಹದಿಂದ ಕೇಳಿ ಬಂದಿತು.

ರಥೋತ್ಸವದ ವೇಳೆ ಸಾವಿರಾರು ಸಂಖ್ಯೆಯಲ್ಲಿ  ನೆರೆದಿದ್ದ ಭಕ್ತ ಸಮೂಹ ರಥದ ಮೇಲೆ ಹಣ್ಣು-ಜವನ ಎಸೆದು ಮಹದೇಶ್ವರ, ಸಿದ್ದೇಶ್ವರ ಸ್ವಾಮಿಗೆ ಭಕ್ತಿ ಸಮರ್ಪಿಸಿದರು.

ಈ ವೇಳೆ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮತ್ತು ಶಿವಬಸವ ಸ್ವಾಮೀಜಿಗಳು ಸಿದ್ದೇಶ್ವರ ಮತ್ತು ಮಾದೇಶ್ವರರು ಎಲ್ಲ  ಭಕ್ತಾಧಿಗಳಿಗೆ ಭಗವಂತ ಸೌಖ್ಯವನ್ನುಂಟು ಮಾಡಲಿ ಎಂದು ಆಶೀರ್ವದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು