ಚಾಮರಾಜನಗರ: ತಮಿಳುನಾಡಿನಿಂದ ಕಲಬೆರೆಕೆ ಡೀಸಲ್ ನ್ನು ತಂದು ತಾಲಕೂನ ಕರಿಕಲ್ಲು ಗಣಿಗಾರಿಕೆಗೆ ಸರಬರಾಜು ಮಾಡುತ್ತಿದ್ದ ಪ್ರಕರಣವನ್ನು ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪತ್ತೆ ಹಚ್ಚಿದ್ದು, ಈ ಸಂಬಂಧ ಟ್ಯಾಂಕರ್ ಹಾಗೂ ಕಲಬೆರಕೆ ಡೀಸಲ್ ನ್ನು ವಶಪಡಿಸಿಕೊಳ್ಳಲಾಗಿದೆ.
ತಮಿಳುನಾಡಿನ ನಾಮಕಲ್ ನ ಆರ್.ಎಂ. ಪೆಟ್ರೋಲಿಯಂ ಸಂಸ್ಥೆಗೆ ಸೇರಿದ ಕಲಬೆರಕೆ ಡೀಸೆಲ್ ತುಂಬಿದ ಟ್ಯಾಂಕರ್ ನ್ನು ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದ ಬಳಿಯ ಶ್ರೀ ಕೃಷ್ಣ ಗ್ರಾನೈಟ್ ನಲ್ಲಿ ಇಳಿಸುವಾಗ ಆಹಾರ ಇಲಾಖೆಯ ಉಪ ನಿರ್ದೇಶಕ ಯೋಗಾನಂದ್ ನೇತೃತ್ವದಲ್ಲಿ ದಾಳಿ ನಡೆಸಿ ಜಪ್ತಿ ಮಾಡಲಾಯಿತು.
ಕೆಲವು ಮೂಲಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ತಮಿಳುನಾಡಿನ ನಾಮಕಲ್ ನ ಆರ್.ಎಂ ಪೆಟ್ರೋಲಿಯಂ ಸಂಸ್ಥೆಯ 170 ಟ್ಯಾಂಕರ್ ಗಳಲ್ಲಿ ಕಲಬೆರಕೆ ಡೀಸೆಲ್ ಸರಭರಾಜು ಮತ್ತು ಮಾರಾಟ ಮಾಡುತ್ತಿದ್ದು, ಪ್ರತಿ ಲೀಟರ್ ಗೆ 51 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕಡಿಮೆ ಬೆಲೆಯಲ್ಲಿ ಡೀಸೆಲ್ ಮಾರಾಟ ಮಾಡುವುದರ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಆಹಾರ ಇಲಾಖೆಯ ಅಧಿಕಾರಿಗಳು 5 ಸಾವಿರ ಲೀಟರ್ ಡೀಸೆಲ್ ಇರುವ ಟ್ಯಾಂಕರ್ ನ್ನು ಮತ್ತು ಚಾಲಕನನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.