ಚಾಮರಾಜನಗರ: ಕೇರಳದಲ್ಲಿ ಕಾಣಿಸಿಕೊಂಡ ಟೊಮೊಟೋ ಜ್ವರ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಬಂಡೀಪುರದ ಮೂಲೆಹೊಳೆ ಗಡಿಯಲ್ಲಿ ತೀವ್ರ ತಪಸಾಣೆ ನಡೆಸಲಾಗುತ್ತಿದೆ.
ಕರೋನಾ ವೈರಸ್ ಸಾಂಕ್ರಾಮಿಕ ರೋಗದ ಭೀತಿಯ ನಡುವೆಯೇ ಈಗ ಮತ್ತೊಂದು ಹೊಸ ವೈರಸ್ ಪತ್ತೆಯಾಗಿರುವುದು ಗಡಿಭಾಗದ ಜನರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.. ಕೇರಳದ ಹಲವೆಡೆ ಈ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದ್ದು ಐದು ವರ್ಷದ ಒಳಪಟ್ಟ 80 ಮಕ್ಕಳಿಗೆ ವಕ್ಕರಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ವೈರಸ್ ಉಲ್ಬಣವಾಗುವ ಮುಂಚೆಯೇ ಅಲರ್ಟ್ ಆಗಿರುವ ಆರೋಗ್ಯ ಇಲಾಖೆ ಬಂಡೀಪುರದ ಕೆಕ್ಕನಹಳ್ಳ, ಮೂಲೆಹೊಳೆ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ತಪಾಸಣೆ ಕೈಗೊಳ್ಳಲಾಗಿದೆ ಎಂದು ಗುಂಡ್ಲುಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದ್ದಾರೆ.
ಟೊಮೆಟೊ ಜ್ವರದ ಮುಖ್ಯ ಲಕ್ಷಣಗಳೆಂದರೆ ಕೆಂಪುಬಣ್ಣದ ಗುಳ್ಳೆಗಳು, ಚರ್ಮದ ಕಿರಿಕಿರಿ ಮತ್ತು ದೇಹದ ಮೇಲೆ ನಿರ್ಜಲೀಕರಣ. ಇದಲ್ಲದೆ, ಸೋಂಕಿತ ಮಕ್ಕಳಲ್ಲಿ ತೀವ್ರ ಜ್ವರ, ದೇಹ ನೋವು, ಕೀಲು ಊತ, ಸುಸ್ತು, ಹೊಟ್ಟೆ ಸೆಳೆತ, ವಾಕರಿಕೆ, ವಾಂತಿ, ಅತಿಸಾರ, ಕೆಮ್ಮು, ಸೀನುವಿಕೆ ಮತ್ತು ಸ್ರವಿಸುವ ಮೂಗು ಮತ್ತು ಕೈಗಳ ಬಣ್ಣ ಬದಲಾವಣೆಯಂತಹ ಲಕ್ಷಣಗಳು ಕಂಡುಬರುತ್ತವೆ.
ಪ್ರತಿನಿತ್ಯ ಸಾವಿರಾರು ಜನರ ಕೇರಳದಿಂದ ಕರ್ನಾಟಕ ಪ್ರವೇಶ ಮಾಡುತ್ತಿರುವ ಹಿನ್ನೆಲೆ ಸರ್ಕಾರದ ಆದೇಶದಂತೆ ಎರಡು ಪಾಲಿಯಲ್ಲಿ ಮೂಲೆಹೊಳೆಯಲ್ಲಿ ತಪಸಾಣೆ ಪ್ರಾರಂಭವಾಗಿದೆ.