ಚಾಮರಾಜನಗರ : ಮಗಳಿಗೆ ಕಿರುಕುಳ ನೀಡುತ್ತಿದ್ದ ಅಳಿಯನನ್ನೇ ಮಾವ ಕೊಂದು ಹಾಕಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಸಮೀಪದ ಜಾಗೇರಿಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲದ ಜಾಗೇರಿಯ ಅಂಥೋಣಿರಾಜ್ ಮೃತ ದುರ್ದೈವಿ. ಮಗಳಿಗೆ ಕಿರುಕುಳ ನೀಡುತ್ತಿದ್ದ ಅಳಿಯ ಮನೆಯಲ್ಲಿ ಕುಡಿದು ಮಲಗಿದ್ದ ವೇಳೆ ತಲೆ ಮೇಲೆ ಕಲ್ಲು ಹಾಕಿ ಮಾವ ಜೂಲಿಯನ್ ರಾಜು ಕೊಲೆ ಮಾಡಿದ್ದಾನೆ. ಕಳೆದ ಮೂರು ವರ್ಷದ ಹಿಂದೆ ಜಾನ್ಸಿ ಯನ್ನು ಪ್ರೀತಿಸಿ ಮದುವೆಯಾಗಿದ್ದ ಮೃತ ಅಂಥೋಣಿರಾಜ್ ಕೊನೆಗೂ ಮಾವನಿಂದಲೇ ಹತ್ಯೆಯಾಗಿದ್ದಾನೆ.
ಪ್ರತಿದಿನ ಕುಡಿದು ಬಂದು ಹೆಂಡತಿಗೆ ಕಿರುಕುಳ ಕೊಡುತ್ತಿದ್ದ ಅಂಥೋಣಿರಾಜ್ನ ಕಿರುಕುಳ ತಾಳಲಾರದೆ ಮಗಳು ಜಾನ್ಸಿ ತಂದೆ ಮನೆ ಸೇರಿಕೊಂಡಿದ್ದಳು. ಅಂಥೋಣಿರಾಜ್ ಸಂಜೆ ಕುಡಿದು ಹೆಂಡತಿ ಮನೆಗೆ ಹೋಗಿ ಗಲಾಟೆ ಮಾಡಿ ಮಲಗಿದ್ದಾನೆ
ವಿಷಯ ತಿಳಿದು ಮನೆಗೆ ಬಂದ ಜೂಲಿಯನ್ ರಾಜು ಅಳಿಯ ಅಂಥೋಣಿರಾಜ್ ನ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಪೊಲಿಸರಿಗೆ ಶರಣಾಗಿದ್ದಾನೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.