ಮೈಸೂರು: ಸಹೋದರನ ಪುತ್ರ ವಿವಾಹ ಸಮಾರಂಭದಲ್ಲಿ ಭಾಗಿಯಾಗಲು ಆಗಮಿಸಿದ ಸಿಎಂ ಸಿದ್ದರಾಮಯ್ಯ ಸ್ವಗ್ರಾಮ ಸಿದ್ದರಾಮನ ಹುಂಡಿಯ ತಮ್ಮ ನಿವಾಸದ ಜಗಲಿಯ ಮೇಲೆ ಕೂತು ಜನರ ಅಹಾವಾಲುಗಳನ್ನು ಸ್ವೀಕರಿಸಿದರು.
ಎರಡು ದಿನಗಳ ಖಾಸಗಿ ಮೈಸೂರು ಪ್ರವಾಸಕ್ಕೆ ಆಗಮಿಸಿರುವ ಸಿಎಂ ಸಿದ್ದರಾಮಯ್ಯ ಇಂದು ಬೆಳಗ್ಗೆ ಸ್ವಗ್ರಾಮ ಸಿದ್ದರಾಮನ ಹುಂಡಿಗೆ ಆಗಮಿಸಿ ಮದುವೆಯಲ್ಲಿ ಪಾಲ್ಗೊಂಡು ನಂತರ ತಮ್ಮ ಸ್ವಗ್ರಾಮ ಸಿದ್ದರಾಮನ ಹುಂಡಿಯಲ್ಲಿರುವ ಮನೆಯ ಜಗುಲಿಯಲ್ಲಿ ಕುರ್ಚಿ ಹಾಕಿ ಕುಳಿತು ಗ್ರಾಮದ ಹಿರಿಯರೊಂದಿಗೆ ಲೋಕಾಭಿರಾಮವಾಗಿ ಮಾತುಕತೆ ನಡೆಸಿದ ಸಿದ್ದರಾಮಯ್ಯ ನಂತರ ಗ್ರಾಮಸ್ಥರು ಅಹವಾಲುಗಳನ್ನು ಆಲಿಸಿ ಸ್ಥಳದಲ್ಲೇ ಅಧಿಕಾರಿಗಳನ್ನ ಕರೆಸಿ ತಕ್ಷಣ ಸಮಸ್ಯೆ ಪರಿಹರಿಸುವಂತೆ ಆದೇಶ ನೀಡಿದರು.
ಮೋದಿ ಹವಾ ಕಡಿಮೆಯಾಗಿದೆ
ತಮ್ಮ ಸಹೋದರನ ಮಗನ ಮದುವೆಯಲ್ಲಿ ಪಾಲ್ಗೊಳಲು ಹೊರಡುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಗುಜರಾತ್ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಬಹಳ ಆಶಾದಾಯಕವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಟೇಲ್ ಸಮುದಾಯವಿರುವ ಕಡೆ ನಡೆಸುತ್ತಿರುವ ಸಭೆಗಳೆಲ್ಲಾ ಫ್ಲಾಫ್ ಆಗಿದೆ. ಜನರು ಸೇರುತ್ತಿಲ್ಲ. ಪ್ರಧಾನ ಮಂತ್ರಿ ಅವರು ನಡೆಸುತ್ತಿರುವ ಸಭೆಗಳಲ್ಲಿ ಕೇವಲ 6 ರಿಂದ 7 ಸಾವಿರ ಜನ ಅಂಥದ್ರೆ ಟೋಟಲಿ ಫೇಲ್ಯೂರ್, ಮೋದಿ ಹವಾ ಕಡಿಮೆ ಅಗುತ್ತಾ ಇದೆ. ಏಕೆಂದರೆ ಚುನಾವಣೆಗೆ ಮುನ್ನ ಏನೇನು ಮಾತು ಕೊಟ್ಟಿದ್ರೂ, ಅದೆಲ್ಲಾ ಹುಸಿಯಾಗಿದೆ ಎಂದರು.