ಮೈಸೂರು- ಸ್ವಾತಂತ್ರ ದಿನಾಚರಣೆಗೆ ಚೈನಾ ಕಂಪನಿ ನೌಕರರಿಗೆ ರಜೆ ನೀಡಿಲ್ಲ ಎಂದು ಕನ್ನಡ ಪರ ಸಂಘಟನೆಯವರು ಚೈನಾ ಕಂಪನಿಯ ಮೊಬೈಲ್ ಷೋರುಂಗೆ ನೂಗ್ಗಿ ಚೈನಾ ಭಾವುಟವನ್ನ ಸುಟ್ಟು ಹಾಕಿರುವ ಘಟನೆ ನಗರದ ಸರಸ್ವತಿಪುರಂನಲ್ಲಿ ನಡೆದಿದೆ.
ನಗರದ ಸರಸ್ವತಿಪುರಂನಲ್ಲಿರುವ ಚೀನಾದ ಓಪೋ ಕಂಪನಿಯ ಮೊಬೈಲ್ ನ ಸಗಟು ವ್ಯಾಪಾರ ಮಳಿಗೆಗೆ ಇಂದು ಸ್ವತಂತ್ರ ದಿನದ ಪ್ರಯುಕ್ತ ಕಂಪನಿಯ ಭಾರತೀಯ ಕೆಲಸಗಾರರಿಗೆ ರಜಾ ನೀಡದೆ ಮೊಬೈಲ್ ಷಾಪ್ ಒಳಗೆ ಚೈನಾ ಭಾವುಟ ಇಟ್ಟುಕೊಂಡಿದ್ದ ಮಳಿಗೆಗೆ ಕನ್ನಡ ಪರ ಸಂಘಟನೆಯವರು ದಾಳಿ ಮಾಡಿ ಅಲ್ಲಿದ ಚೀನಾ ಭಾವುಟವನ್ನ ಸುಟ್ಟು ಹಾಕಿ ಚೀನಾದ ಕಂಪನಿಯ ಮ್ಯಾನೇಜರ್ ನ್ನ ಬಾಯಲ್ಲಿ ವಂದೇ ಮಾತರಂ ಗೀತೆ ಹಾಡಿಸಿ ಭಾರತ್ ಮಾತಾ ಕೀ ಜೈ ಎಂದು ಬಲವಂತವಾಗಿ ಹೇಳಿಸಿದ್ದಾರೆ