ರಾಜ್ಯದ ಕಾವೇರಿ ಜಲಾನಯನ ಕಣಿವೆ ಪ್ರದೇಶದಲ್ಲಿ ಮಳೆ ಕಡಿಮೆಯಾದ ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ಗುರುವಾರ ಕೃಷ್ಣರಾಜಸಾಗರ ಜಲಾಶಯದ ಬಳಿ ಪರ್ಜನ್ಯ ಪೂಜೆ ಮಾಡಿದ ಬಳಿಕ ರಾಜ್ಯದಾದ್ಯಂತ ಮಳೆ ತೀವ್ರಗೊಂಡಿರುವುದಲ್ಲದೆ, ಕೃಷ್ಣರಾಜಸಾಗರ ಜಲಾಶಯಕ್ಕೆ 1.26 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ.
ಸಧ್ಯ ಜಲಾಶಯದಲ್ಲಿ 115.96 ಅಡಿ ಸಂಗ್ರಹವಾಗಿದ್ದು, ಕಳೆದ ಬುಧವಾ ಜಲಾಶಯದಲ್ಲಿ 114.70 ಅಡಿ ನೀರು ಸಂಗ್ರವಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಂಪತಿ ಪೂಜೆ ಬಳಿಕ ಕೆ.ಆರ್.ಎಸ್.ಗೆ. ಹರಿದುಬರುತ್ತಿರುವ ಒಳ ಹರಿವಿನ ಪ್ರಮಾಣವೂ ಹೆಚ್ಚಿದೆ.
ಕಳೆದ ಬುಧವಾರ ಜಲಾಶಯಕ್ಕೆ 6170 ಕ್ಯುಸೆಕ್ ನೀರು ಹರಿದುಬರುತ್ತಿದ್ದರೆ, 6345 ಕ್ಯುಸೆಕ್ ನೀರು ಹೊರ ಹರಿವು ದಾಖಲಾಗಿತ್ತು.
ಮುಖ್ಯಮಂತ್ರಿಗಳ ಪೂಜೆ ಬಳಿಕ ಗುರುವಾರ ಜಲಾಶಯಕ್ಕೆ 13,795 ಕ್ಯುಸೆಕ್ ನೀರು ಹರಿದುಬಂದರೆ, 6387 ಕ್ಯುಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿತ್ತು. ಜಲಾಶಯದಲ್ಲಿ 115.25 ಅಡಿ ನೀರು ಸಂಗ್ರಹವಾಗಿತ್ತು.
ಶುಕ್ರವಾರ ಜಲಾಶಯಕ್ಕೆ 11893 ಕ್ಯುಸೆಕ್ ಒಳ ಹರಿವು ಇದ್ದರೆ, 6418 ಕ್ಯುಸೆಕ್ ಹೊರಗೆ ಹರಿಸಲಾಗುತ್ತಿತ್ತು. ಅಣೆಕಟ್ಟೆಯಲ್ಲಿ 115.54 ಅಡಿ ನೀರು ಇತ್ತು. ಶನಿವಾರ ಜಲಾಶಯದಲ್ಲಿ 115.62 ಅಡಿಗೆ ಏರಿಕೆಯಾಗಿದ್ದು, 7692 ಕ್ಯುಸೆಕ್ ನೀರು ಹರಿದುಬರುತ್ತಿದ್ದರೆ, 6422 ಕ್ಯುಸೆಕ್ ಹೊರಗೆ ಬಿಡಲಾಗುತ್ತಿತ್ತು.
ಭಾನುವಾರ 115.67 ಅಡಿ ನೀರು ಸಂಗ್ರಹವಾಗಿದ್ದರೆ, ಜಲಾಶಯಕ್ಕೆ 7429 ಕ್ಯುಸೆಕ್ ಒಳಹರಿವು, 6423 ಕ್ಯುಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿತ್ತು. ಸೋಮವಾರ ಜಲಾಶಯದಲ್ಲಿ 115.96 ಅಡಿ ನೀರು ಏರಿಕೆಯಾಗಿದ್ದರೆ, 9791 ಕ್ಯುಸೆಕ್ ಒಳ ಹರಿವು ಹಾಗೂ 5343 ಕ್ಯುಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿತ್ತು. ಒಟ್ಟಾರೆ ಮುಖ್ಯಮಂತ್ರಿಗಳ ಪೂಜೆ ಬಳಿಕ ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹ ಏರಿಕೆಯಾಗಿರುವುದನ್ನೂ ಸತ್ಯ.