ಮೈಸೂರು: ನಿಂತಿದ್ದ ಭತ್ತ ಕಟಾವು ಯಂತ್ರಕ್ಕೆ ಬೈಕ್ ಡಿಕ್ಕಿ ಹೊಡೆದು, ಅದರ ಸವಾರ ಸಾವನ್ನಪ್ಪಿ, ಮತ್ತೊಬ್ಬ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಆಲಗೂಡು ಸಮೀಪ ನಡೆದಿದೆ.
ಸತೀಶ್ (34) ಮೃತಪಟ್ಟ ದುರ್ದೈವಿ.ಗಂಭೀರ ಗಾಯಗೊಂಡ ಹಿಂಬದಿ ಬೈಕ್ ಸವಾರ ರಘು ಎಂಬಾತನನ್ನು ಮೈಸೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇವರು ಚಾಮರಾಜನಗರ ಜಿಲ್ಲೆಯ ಕಮ್ಮರವಾಡಿ ಗ್ರಾಮದ ನಿವಾಸಿಗಳು. ತಿ.ನರಸೀಪುರ ತಾಲ್ಲೂಕಿನ ಆಲಗೋಡು ಗ್ರಾಮದ ದಮ್ಮಯ್ಯನ ಬೋರೆ ಬಳಿ ಬೈಕ್ನಲ್ಲಿ ಹೋಗುತ್ತಿದ್ದಾಗ ರಾಷ್ಟೀಯ ಹೆದ್ದಾರಿ 212ರಲ್ಲಿ ನಿಂತಿದ್ದ ಭತ್ತ ಕಟಾವು ಯಂತ್ರಕ್ಕೆ ಬೈಕ್ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ತಿ. ನರಸೀಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.