ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಕರಬ್ಬಿಯಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆ 7ಕ್ಕೇರಿದೆ.
ಸೆ.23 ರಂದು ಕಲುಷಿತ ನೀರು ಸೇವನೆ ಮಾಡಿದ್ದ ವೃದ್ಧೆ ನಾಗಮ್ಮ ದೊಡ್ಡಬಾರಿಕೇರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಬೋರ್ವೆಲ್ನಿಂದ ಹೊಸ ಪೈಪ್ಲೈನ್ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಹಳೆ ಪೈಪ್ಗೆ ಡ್ಯಾಮೇಜ್ ಆಗಿದೆ. ಇದಕ್ಕೆ ಚರಂಡಿ ನೀರು ಸೇರಿದ್ದು, ಇದನ್ನು ಸೇವಿಸಿದ ಗ್ರಾಮದ 200ಕ್ಕೂ ಹೆಚ್ಚು ಮಂದಿಗೆ ವಾಂತಿ ಬೇಧಿ ಸಮಸ್ಯೆ ಕಾಡಿತ್ತು.