ಮೈಸೂರು: ಕಳೆದ 10 ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವ ಇಂದು ಶವವಾಗಿ ಪತ್ತೆಯಾಗಿದ್ದಾನೆ.
ಮೃತನನ್ನು ಟಿ.ನರಸೀಪುರ ತಾಲ್ಲೂಕಿನ ಕರೋಹಟ್ಟಿ ಗ್ರಾಮದ ನಿವಾಸಿ ಉಮೇಶ್ ಎಂದು ಗುರುತಿಸಲಾಗಿದ್ದು, ಮೃತ ದೇಹ ಟಿ.ನರಸೀಪುರದ ಮುಸುವಿನಕೊಪ್ಪಲು ಗ್ರಾಮದ ಬಳಿ ಕಪಿಲಾ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಳೆದ ಅಗಸ್ಟ್ 8 ರಂದು ಉಮೇಶ್ ನಾಪತ್ತೆಯಾಗಿದ್ದರು. ಮೃತ ಉಮೇಶ್ ನನ್ನು ಪತ್ನಿ ಮೀನಾಕ್ಷಿ ತನ್ನ ಪ್ರಿಯಕರ ತ್ರಿನೇತ್ರ ಜೊತೆ ಸೇರಿ ಕೊಲೆ ಮಾಡಿ ನದಿಗೆ ಬೀಸಾಡಿದ್ದಳು. ಮೃತ ದೇಹಕ್ಕಾಗಿ ಪೋಲಿಸರು ಕಳೆದ ನಾಲ್ಕು ದಿನಗಳಿಂದ ನದಿಯಲ್ಲಿ ತೀವ್ರ ಶೋಧನೆ ನಡೆಸುತ್ತಿದ್ದರು. ಇದೀಗ ಇಂದು ಉಮೇಶ್ ಅವರ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.