ಶಿವಮೊಗ್ಗ: ತನ್ನ ವಿರುದ್ಧ ದಾಖಲಾದ ಕೇಸ್ ನಿಂದ ನೊಂದ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಬಸ್ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಘಟನೆ ಶಿವಮೊಗ್ಗ ಕೆಎಸ್ಆರ್ಟಿಸಿ ಬಸ್ ನಿಲ್ದಾಣಸುಚಿದೆದಲ್ಲಿ ನಡೆದಿದೆ.
ಮಾರ್ಚ್ 23ರ ಮಧ್ಯಾಹ್ನ 2 ಗಂಟೆ ವೇಳೆಗೆ ವಿಷ ಸೇವಿಸಿ ಬಸ್ ನಲ್ಲೆ ನರಳಾಡಿದ್ದಾನೆ ಅದೃಷ್ಟ ಎನ್ನುವಂತೆ ಅದೇ ವೇಳೆಗೆ ಸಹೋದ್ಯೋಗಿಗಳು ಬಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
38 ವರ್ಷದ ಬಸವರಾಜ್, ಕಳೆದ 10 ವರ್ಷದಿಂದ KSRTCಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅನುಚಿತ ವರ್ತನೆ ಹಿನ್ನೆಲೆಯಲ್ಲಿ ಬಸವರಾಜ್ ವಿರುದ್ಧ ಕೇಸ್ ದಾಖಲಾಗಿತ್ತು. ಕೇಸ್ಗೆ ಸಂಬಂಧಿಸಿದಂತೆ ನಿನ್ನೆ ಬಸವರಾಜ್ ಅವರು ವಿಚಾರಣೆಗೆ ಹಾಜರಾಗಿದ್ದರು.ವಿಚಾರಣೆ ಬಳಿಕ ಶಿವಮೊಗ್ಗ-ಭದ್ರಾವತಿ KSRTC ಬಸ್ನಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದಕ್ಕೆ ಅಧಿಕಾರಿಗಳು ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ದರೂ ಇನ್ನೂ ಖಚಿತ ಮಾಹಿತಿ ದೊರೆತಿಲ್ಲ.