ಶಿವಮೊಗ್ಗ: ಅಗ್ನಿ ದುರಂತಕ್ಕೆ ಶರತ್ ಭೂಪಾಳಂ ದುರ್ಮರಣವಾಗಿರುವ ಬೆನ್ನಲ್ಲೇ ಅಗ್ನಿಶಾಮಕ ದಳದ ಕಾರ್ಯಕ್ಷಮತೆ ಮತ್ತು ಉಪಕರಣಗಳ ಕುರಿತು ಹಲವು ಅನುಮಾನಗಳು ಎದ್ದಿತ್ತು. ಈ ಅನುಮಾನಗಳ ಕುರಿತು ಪರಿಶೀಲನೆ ನಡೆಸಲು ಖುದ್ದು ಶಾಸಕ ಈಶ್ವರಪ್ಪ ಸಾಗರ ರಸ್ತೆಯ ಅಗ್ನಿಶಾಮಕದಳದ ಕಚೇರಿಗೆ ಭೇಟಿಯಾಗಿ ಸಿಬ್ಬಂದಿಗಳಿಗೆ ಮತ್ತು ಅಧಿಕಾರಿಗಳಿಗೆ ಸಕ್ಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇಂದು ಬೆಳಿಗ್ಗೆ 10 ಗಂಟೆಗೆ ಭೇಟಿ ನೀಡಿದ ಈಶ್ವರಪ್ಪ ಭೂಪಾಳಂ ಕುಟುಂಬದವರ ಜೊತೆ ಅಗ್ನಿಶಾಮಕ ದಳಕ್ಕೆ ಭೇಟಿಕೊಟ್ಟರು. ಈ ವೇಳೆ ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು. ಡಿಎಫ್ ಒ ಅಶೋಕ್ ಮತ್ತು ಸಿಬ್ಬಂದಿಗಳನ್ನ ತರಾಟೆಗೆ ತೆಗೆದುಕೊಂಡ ಈಶ್ವರಪ್ಪ ಅಗ್ನಿ ದುರಂತದ ವೇಳೆ ಬಂದ ಮೊದಲ ವಾಹನದಲ್ಲಿ ಉಪಕರಣಗಳ ಕೊರತೆ ಬಗ್ಗೆ ವಿಚಾರಣೆ ನಡೆಸಿದರು.
ನಂತರ ಮಾತನಾಡಿದ ಈಶ್ವರಪ್ಪ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನ ರಚಿಸಲಾಗಿದೆ. ಈ ಸಮಿತಿ 10 ದಿನಗಳಲ್ಲಿ ವರದಿ ನೀಡಲು ಸೂಚಿಸಲಾಗಿದೆ. ವರದಿ ಬಙದ ನಂತರ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಆದರೆ ಇದೇ ವ್ಯವಸ್ಥೆಯೊಂದಿಗಿನ ಅಗ್ನಿಶಾಮಕದಳ ಎಚ್ಚೆತ್ತುಕೊಂಡಿಲ್ಲವೇಕೆ ಎಂದು ಮಾಧ್ಯಮದವರು ಕೇಳಿದಾಗ ಈ ವಿಷಯ ಈಗ ಬೆಳಕಿಗೆ ಬಂದಿದೆ. ಹೈಪ್ರೊಫೈಲ್ ಮತ್ತು ಲೋಪ್ರೊಫೈಲ್ ಪ್ರಶ್ನೆ ಅಲ್ಲ. ಜೀವದ ಪ್ರಶ್ನೆಯಾಗಿದೆ. ವರದಿ ಬಂದ ಮೇಲೆ ಏನು ಅಂತ ನೋಡಿ ಕ್ರಮಜರುಗಿಸಲಾಗುವುದು ಎಂದರು.