ಶಿವಮೊಗ್ಗ: ಮಲ್ಲಿಗೇನ ಹಳ್ಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ಅಪ್ಪರ್ ತುಂಗ ಜಾಗವನ್ನ ಇಲ್ಲಿನ ಹಕ್ಲಿಪಿಕ್ಕಿ ಜನ ಅಕ್ರಮ ಮನೆ ನಿರ್ಮಿಸಿಕೊಂಡಿದ್ದು ಅವರನ್ನ ತೆರವುಗೊಳಿಸಲು ಯುಟಿಪಿ ಇಲಾಖೆ ಅನೇಕ ಬಾರಿ ನೋಟೀಸ್ ನೀಡಲಾಗುತ್ತು.
ಆದರೆ ನೋಟೀಸ್ ಗೆ ಉತ್ತರ ನೀಡಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 1-16 ಕ್ಕೆ ಪ್ರತಿಭಟನ ನಿರತ ಡಿಎಸ್ ಎಸ್ಅಂಬೇಡ್ಕರ್ ವಾದದ ಹಾಲೇಶಪ್ಪ, ಜಗ್ಗು ಅವರೊಂದಿಗೆ ಮಾತನಾಡಿದ ಎಕ್ಸಿಕ್ಯೂಟಿವ್ ಇಂಜಿನಿಯರ್ ಹರೀಶ್ ನೀವು ತಡೆ ನೀಡಲು ಕೋರ್ಟ್ನಿಂದ ಯಾವ ಆದೇಶವೂ ತಂದಿಲ್ಲ ಹಾಗಾಗಿ ತೆರವುಗೊಳಿಸುತ್ತಿದ್ದೇವೆ ಎಂದರು.
ನಮಗೆ 6 ತಿಂಗಳು ಕಾಲಾವಕಾಶಕೊಡಿ ಕಾಲಾವಕಾಶ ನೀಡಿದ ನಂತರ ವಸತಿ ಸಚಿವರಿಂದಲೇ ಅನುಮತಿ ತರಲಿದ್ದೇವೆ ಎಂದರು. ಇಲ್ಲ ನಿಮಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ ಕೋರ್ಟ್ ನಿಂದ ತಡೆಯಾಜ್ಞೆನೂ ತಂದಿಲ್ಲ. ನಮ್ಮ ತೆರವು ಕಾರ್ಯಾಚರಣೆ ಮುಂದುವರೆಸುತ್ತೇವೆ ಎಂದು ಹೇಳಿ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿದರು.
ಪ್ರತಿಭಟನ ನಿರತ ಹಾಲೇಶಪ್ಪ, ಮೀನು, ಎಂಬುವರನ್ನ ವಶಕ್ಕೆ ಪಡೆಯಲಾಯಿತು. ಜಗ್ಗು ಎಂಬುವರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದು ಪೊಲೀಸರು ಅವರನ್ನೂ ವಶಕ್ಕೆ ಪಡೆಯಲಾಯಿತು. ನಾಲ್ಕು ಮನೆಗಳನ್ನ ತೆರವುಗೊಳಿಸಲಾಯಿತು. ಮತ್ತೆ 15ದಿನದ ಒಳಗೆ ತಮ್ಮ ಮನೆಗಳನ್ನ ತಾವಾಗಿಯೇ ತೆರವು ಗೊಳಿಸಿಕೊಳ್ಳ ಬೇಕು ಇಲ್ಲವಾದರೆ ಇಲಾಖೆ ತೆರವುಗೊಳಿಸಲಿದೆ ಎಂದು ಸೂಚಿಸಲಾಯಿತು.