ಶಿವಮೊಗ್ಗ: ಸೈಬರ್ ಕ್ರೈಂ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ (ಹಾಲಿ ಕಡೂರು ಪಿ.ಟಿ.ಎಸ್) ಗುರುರಾಜ್ ಕೆ. ಟಿ ಅವರು ಪೊಕ್ಸೊ & ಇ ಟಿ ಕಾಯ್ದೆ ಅಡಿಯಲ್ಲಿ ದಾಖಲಾದ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿ ದೋಷರೋಪಣ ಪತ್ರ ಸಲ್ಲಿಸಿದ್ದರು.
ಈಗ ಘನ ನ್ಯಾಯಾಲಯದಲ್ಲಿ ಆರೋಪಿಗೆ ಶಿಕ್ಷೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಡಿ ಎಸ್ ಸಿ ನಿಂದ ನೀಡಲಾಗುವ ಡಿ ಎಸ್ ಸಿ- ಎಕ್ಸಲೆನ್ಸ್ ಪ್ರಶಸ್ತಿ – 2022 ರ ಸಾಲಿನ ಭಾರತೀಯ ಸೈಬರ್ ಕಾಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹರ್ಯಾಣ ರಾಜ್ಯದ ಗುರ್ಗಾಂವ್ ನಲ್ಲಿ ಡಿ.22 ರಂದು ನಡೆದ ಎನ್ ಆರ್ ಎಸ್ ಎಸ್ ಸಿ ಓ ಎಂ-ಡಿ ಎಸ್ ಸಿ- ವಾರ್ಷಿಕ ಮಾಹಿತಿ ಭದ್ರತಾ ಶೃಂಗಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲಾ ಪೋಲಿಸ್ ಅಧೀಕ್ಷಕರು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗುರುರಾಜ್ ಕೆಟಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.