ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಮಿಡ್ ಟೌನ್ ವಲಯ – 3, ಸ್ವಸ್ತಿಕ ಚಾರಿಟೇಬಲ್ ಟ್ರಸ್ಟ್ ಮತ್ತು ಜಿಲ್ಲಾ ಕಾರಾಗೃಹ ಮಂಗಳೂರಿನ ಸಹಯೋಗದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಯಿತು.
ಕ್ಯಾಪ್ಟನ್ ಪ್ಯಾಟ್ರಿಕ್ ರೊಸರಿಯೋ ಪೈಸ್ ಇವರು “ಸಸಿಗೆ ನೀರನ್ನು ಹಾಕುವುದರ ಮೂಲಕ” ಸಮಾರಂಭವನ್ನು ಉದ್ಘಾಟಿಸಿ ಕೈದಿಗಳಿಗೆ “ಕಾರಾಗೃಹ ಎಂಬುದು ತಪ್ಪನ್ನು ತಿದ್ದುವಂತಹ ಸ್ಥಳ” ಎಂದು ಉದಾಹರಣೆಗೆ ಕೊಡುವ ಮೂಲಕ ಶುಭಹಾರೈಸಿದರು.
ಮಂಗಳೂರು ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಬಿ.ಟಿ ಒಬಳೇಶಪ್ಪ ರವರು ಪ್ರಸ್ತಾವಿಕ ಭಾಷಣ ಮಾಡಿದರು. ಗೌರವ ಅತಿಥಗಳಾದ ಅಮಿತಾಬ್ ಬಾರ್ಗವ್ ಮತ್ತು ಮುಖ್ಯ ಅತಿಥಿಗಳಾದ ರಾಜ್ ಮೋಹನ್ ಭಂಡಾರಿ ಹಾಗೂ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ನ ಅಧ್ಯಕ್ಷರಾದ ಡಾ.ರಾಘವೇಂದ್ರ ಹೊಳ್ಳ.ಎನ್ ಮತ್ತು ಪ್ರಾಂಶುಪಾಲರಾದ ಡಾ.ಮಾಲಿನಿ ಎನ್.ಹೆಬ್ಬಾರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಸ್ತಿಕ ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿಗಳು ವಿವಿಧ ರೀತಿಯ ಮನೋರಂಜನೆಯ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೀಡಿದರು.