ಶಿವಮೊಗ್ಗ: ಹುಣಸೋಡು ಸ್ಪೋಟಗೊಂಡು ಜ.21 ಬಂದರೆ ಭರ್ತಿ ಎರಡು ವರ್ಷ. ಎರಡು ವರ್ಷ ಕಳೆದರೂ ಸ್ಪೋಟದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಿಲ್ಲವೆಂದು ಆಗ್ರಹಿಸಿ ಸಂತ್ರಸ್ತರು ಇಂದು ಜಿಲ್ಲಾಧಿಕಾರಿಗಳಿಗೆ ಬಂದು ಮನವಿ ಸಲ್ಲಿಸಿದ್ದಾರೆ.
ಹುಣಸೋಡು ಸ್ಪೋಟದಿಂದ ಸುತ್ತಮುತ್ತಲಿನ ಬಸವನಗಂಗೂರು, ಕೋಟೆಗೂರಿನ ಗ್ರಾಮದ ಜನರ ಮನೆಗಳು ನಲುಗಿ ಹೋಗಿದ್ದವು ಕೆಲವರ ಮನೆ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಯಾಗಿದ್ದವು. ಜಾನುವಾರುಗಳು ಸತ್ತಿದ್ದವು.
ಕನ್ನಡ ನವ ಕರ್ನಾಟಕ ನಿರ್ಮಾಣ ವೇದಿಕೆಯ ಗೋ.ರಮೇಶ್ ಗೌಡರ ನೇತೃತ್ವದಲ್ಲಿ ಇಂದು ಹುಣಸೋಡು ಪ್ರಕರಣದಲ್ಲಿ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟಿಸಿದರು.
ಪ್ರತಿಭಟನೆ ನಡೆಸಿದ ವೇಳೆ ಶಾಸಕ ಈಶ್ವರಪ್ಪ ಜಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಮುಗಿಸಿಕೊಂಡು ಹೊರಹೋಗುವಾಗ ಪ್ರತಿಭಟನಕಾರರು ಪರಿಹಾರ ಕೊಡಿಸಲು ಆಗ್ರಹಿಸಿದರು.
ನಗರದಲ್ಲಿ ಮತ್ತು ತಾಲೂಕಿನಲ್ಲಿ ಸಾವಿರಾರುಕೋಟಿ ಅಭಿವೃದ್ದಿ ಕಾರ್ಯಗಳು ನಡೆದಿದೆ ಅದರಲ್ಲಿ 10 ಕೋಟಿ ಹಣವನ್ನ ಸಂತ್ರಸ್ತರಿಗೆ ನೀಡುವಂತೆ ಒತ್ತಾಯಿಸಿದರು. ಆದರೆ ಶಾಸಕರು ಮಾತನಾಡಿ ಎರಡು ಬಾರಿ ಸರ್ಕಾರಕ್ಕೆ ಪರಿಹಾರನೀಡಲು ಮನವಿ ಮಾಡಿಕೊಳ್ಳಲಾಗಿದೆ ಪರಿಹಾರ ನೀಡಲಾಗದು ಎಂಬ ವರದಿ ಬಂದಿದೆ ಎಂದರು.
ಹಾಗಾದರೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಮನವಿ ಮಾಡಿಕೊಂಡ ಮನವಿ ಪ್ರತಿ ನೀಡಿದರೆ ನ್ಯಾಯಾಲಯಕ್ಕೆ ಹೋಗುವುದಾಗಿ ಪ್ರತಿಭಟನಾಕರರಾದ ಗೋ.ರಮೇಶ್ ಗೌಡ ಹೇಳಿದ್ದಕ್ಕೆ ಜಿಲ್ಲಾಡಳಿತ ನೀಡಲಿದೆಎಂದು ಶಾಸಕರು ಭರವಸೆ ನೀಡಿದರು. ಪ್ರತಿಭಟನೆ ಮುಂದು ವರೆದಿತ್ತು.