ಶಿವಮೊಗ್ಗ: ಜಿಲ್ಲೆ ಹೊಸನಗರದ ಯಡೂರು ಸಮೀಪ ಬರುವ ಅಬ್ಬಿ ಫಾಲ್ಸ್ನಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಈಜಲು ಹೋಗಿದ್ದ ಯುವಕ ನೀರು ಪಾಲಾಗಿದ್ದಾನೆ.
ತೀರ್ಥಹಳ್ಳಿ ಮೂಲದ ಮೂಲದ ಮೂವರು ಅಬ್ಬಿಫಾಲ್ಸ್ ನೋಡಲು ಬಂದಿದ್ದರು. ಈ ವೇಳೆ ಫಾಲ್ಸ್ನ ಕೆಳಗಡೆ ಈಜಲು ಮುಂದಾಗಿದ್ದಾರೆ. ಈ ಪೈಕಿ ಓರ್ವ ಈಜಲು ನೀರಿಗೆ ಇಳಿದವನು ಮುಳುಗಿದ್ಧಾನೆ. ಮುಳುಗಿದ ಯುವಕ ಮೇಲೇರಿ ಬರಲಿಲ್ಲ.
ಇನ್ನೂ ವಿಷಯ ಗೊತ್ತಾಗುತ್ತಲೇ ಸ್ಥಳೀಯರು ಹಾಗೂ ಪೊಲೀಸರು ಫಾಲ್ಸ್ನಲ್ಲಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಕೆಲಹೊತ್ತಿನ ಹುಡುಕಾಟದ ನಂತರ ಯುವಕ ಶವವಾಗಿ ಪತ್ತೆಯಾಗಿದ್ದು, , ಆತನನ್ನು ರಿಷಬ್ ಎಂದು ಗುರುತಿಸಲಾಗಿದೆ. ತೀರ್ಥಹಳ್ಳಿಯಲ್ಲಿ ಡಿಪ್ಲೋಮೋ ಓದುತ್ತಿದ್ದಾನೆ ಎಂದು ಗೊತ್ತಾಗಿದ್ದು, ಸದ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.