ಶಿವಮೊಗ್ಗ: ಪಿಎಫ್ಐ ಕಾರ್ಯಕರ್ತನ ಮನೆಯ ಮೇಲೆ ರಾಜ್ಯ ಪೊಲೀಸ್ ಎಟಿಸಿ ದಾಳಿ ನಡೆಸಿದೆ. ದಾಳಿಯಲ್ಲಿ ಓರ್ವನನ್ನ ಪೊಲೀಸರು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗದ ಮೀನು ಮಾರ್ಕೆಟ್ ಬಳಿಯಿರುವ ಶಾಹೀದ್ ಖಾನ್ ಎಂಬುವರ ಮನೆಯ ಮೇಲೆ ಬೆಂಗಳೂರು ಪೊಲೀಸರು ಉಗ್ರ ನಿಗ್ರಹದಳ(ಎಟಿಸಿ) ದಾಳಿ ನಡೆಸಿದ್ದಾರೆ. ಬೆಳ್ಳಂಬೆಳಿಗ್ಗೆ 6-30 ರಸಮಯದಲ್ಲಿ ದಾಳಿ ನಡೆಸಿ ಶಾಹಿದ್ ಖಾನ್ ರನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ.
ಶಾಹಿದ್ ಖಾನ್ ಪಿಎಫ್ಐ ಸಂಘಟನೆಯ ಪ್ರಾದೇಶಿಕ ವಲಯದ ಅಧ್ಯಕ್ಷನಾಗಿದ್ದು ಈತ ಶಿವಮೊಗ್ಗ ಸೇರಿದಂತೆ ಇತರೆ ಎರಡು ಜಿಲ್ಲೆಗಳಿಗೆ ಮುಖ್ಯಸ್ಥನಾಗಿದ್ದಾನೆ.
ಬೆಂಗಳೂರಿನ ಕೆಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಗೆ ಶಾಹಿದ್ ಖಾನ್ ಸಹಕಾರಿಯಾಗಿದ್ದಾನೆ ಎಂಬ ಆರೋಪದ ಅಡಿಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.