ಶಿವಮೊಗ್ಗ: ಸೊರಬ ತಾಲೂಕು ಕುಪ್ಪಗಡ್ಡೆ ಹೋಬಳಿ ತತ್ತೂರು ಗ್ರಾಮದ ನೆಗವಾಡಿಯಲ್ಲಿ ಆಕಳಿನ ಮೈ ತೊಳೆಯಲು ಹೋದವ ನೀರು ಪಾಲಾಗಿದ್ದು ಆತನ ಮೃತ ದೇಹ ದೊರತಿದೆ.
ನೆಗವಾಡಿಯ ದೊಡ್ಡಕೆರೆಯಲ್ಲಿ ಆಕಳಿನ ಮೈ ತೊಳಿಯುವಾಗ ಆಕಳಿಗೆ ಕಟ್ಟಿದ್ದ ಹಗ್ಗದ ಸಮೇತ ಎಳೆದುಕೊಂಡು ಹೋಗಿದೆ. ಇದರಿಂದ ಉಮೇಶ್. ಬಿ ನೀರಿನಲ್ಲಿ ಮುಳುಗಿದ್ದಾನೆ.
ಇದನ್ನ ಕಂಡ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಕರೆ ಮಾಡಿದ ತಕ್ಷಣ ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕದಳದ ಸಿಬ್ವಂದಿಗಳು ಬೋಟ್ ನಲ್ಲಿ ಗ್ರಾಫನಲ್ ಮೂಲಕ ಆತನ ಮೃತದೇಹವನ್ನ ಪತ್ತೆ ಮಾಡಲಾಗಿದೆ.
ಸತತ ಎರಡು ಗಂಟೆಯ ನಂತರ ಉಮೇಶ್ ಮೃತದೇಹ ಪತ್ತೆಯಾಗಿದೆ. ಉಮೇಶ್ ಓರ್ವ ಪತ್ನಿ ಇಬ್ಬರು ಮಕ್ಕಳನ್ನ ಬಿಟ್ಟು ಅಗಲಿದ್ದಾರೆ. ಪ್ರಕರಣ ಸೊರಬ ಠಾಣೆಯಲ್ಲಿ ಅಸಹಜ ಸಾವು ಪ್ರಕರಣದಲ್ಲಿ ದಾಖಲಾಗಿದೆ.