News Karnataka Kannada
Tuesday, May 07 2024
ಶಿವಮೊಗ್ಗ

ಶಿವಮೊಗ್ಗ: ಗೋಪಾಳದ ನ್ಯೂಮಂಡ್ಲಿ ಬೈಪಾಸ್ ನಲ್ಲಿರುವ ಅಲ್ ತಾಜ್ ಪೆಟ್ರೋಲ್ ಬಂಕ್ ನಲ್ಲಿ ಗಲಾಟೆ

Petrol
Photo Credit : By Author

ಶಿವಮೊಗ್ಗ: ಗೋಪಾಳದ ನ್ಯೂಮಂಡ್ಲಿ ಬೈಪಾಸ್ ನಲ್ಲಿರುವ ಅಲ್ ತಾಜ್ ಪೆಟ್ರೋಲ್ ಬಂಕ್ ನಲ್ಲಿ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕನ ಮಗನ‌ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ಐವರ ಮೇಲೆ ದೂರು ದಾಖಲಾಗಿದೆ.

ಅಲ್ ತಾಜ್ ಪೆಟ್ರೋಲ್ ಬಂಕ್ ನಲ್ಲಿ ಸಂಜೆ ತಂದೆಯವರು ವಿಶ್ರಾಂತಿಗೆ ಹೋದ ವೇಳೆ ಮೊಹ್ಮದ್ ತೋಹಿದ್ ಪಾಶ ಎಂಬುವರು ಬಂದಾಗ ಇಬ್ಬರು ವ್ಯಕ್ತಿಗಳು ಡಿಯೋ ಬೈಕ್ ನಲ್ಲಿ ಬಂದಾಗ ಬಂಕ್ ನ ಪಂಪ್ ಹಾಳಾಗಿದೆ ಆ ಕಡೆ ಹೋಗಿ ಪೆಟ್ರೋಲ್ ಹಾಕಿ ಎಂದಾಗ ಯಾಕೆ ಸರಿಮಾಡಿಸಿಲ್ಲ ಎಂದು ಅವ್ಯಾಚ್ಯ ಶಬ್ದದಲ್ಲಿ ಬೈದಿದ್ದಾರೆ.

ಯಾಕೆ ಬೈಯ್ಯುತ್ತಿದ್ದೀರ ಎಂದು ತೋಹಿದ್ ಪಾಶ ಕೇಳಿದ್ದಕ್ಕೆ ಮತ್ತೆ ಅವ್ಯಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಮುಂದಾಗಿದ್ದಾರೆ. ಬಂಕ್ ನ ಪಕ್ಕದ ಪಂಪ್ ಗೆ ಹೋಗಿ ಪೆಟ್ರೋಲ್ ಹಾಕಿಸಿಕೊಂಡ ಬೈಕ್ ಸವಾರರು ಹಣಕೊಡುವುದಿಲ್ಲವೆಂದು ಕ್ಯಾತೆ ತೆಗೆದಿದ್ದಾರೆ. ಬೈಕ್ ತಿರುಗಿಸಿಕೊಂಡು ಹೋಗಲು ಯತ್ನಿಸಿದಾಗ ತೋಹಿದ್ ಪಾಶ ಅವರನ್ನ ತಡೆದು ಹಣ ಕೇಳಿದ್ದಾರೆ.

ಹಣಕೊಡಲ್ಲ ಯಾರಿಗೆ ಕರೆಯುತ್ತೀಯ ಕರೆ ಎಂದು ಅವಾಜ್ ಹಾಕಿದ್ದಾನೆ. ಇನ್ನೋರ್ವ ಡಿಯೋ ಬೈಕ್ ನಿಂದ ಇಳಿದು ಬಂದು ಫೈರ್ ಎಸ್ಟಿಗೇಷನ್ ಸಿಲಿಂಡರ್ ನಿಂದ ಹಲ್ಲೆ ನಡೆಸಿ ಬುಜಕ್ಕೆ ನೋವು ಪಡೆಸಿದ್ದಾನೆ. ಸ್ಥಳೀಯರು ಜಗಳ ಬಿಡಿಸಿದ್ದಾರೆ. ನಂತರ ಬೈಕ್ ನಲ್ಲಿ ಬಂದವರು ಮೊಬೈಲ್ ನಿಂದ ಇತರೆ ಹುಡುಗರನ್ನ ಕರೆಯಿಸಿ ಗಲಾಟೆ ನಡೆಸಿದ್ದಾರೆ.

ನಂತರ ಹಲ್ಲೆ ಮಾಡಿದವರು ಯಾರು ಎಂದು ವಿಚಾರಿಸಿದಾಗ ಫೈಸಲ್, ಅಯೂಬ್, ಶೋಯೇಬ್ , ಇರ್ಫಾನ್ ಯಾನೆ ಕಡ್ಡಿ ಮತ್ತು ಇತರರು ಎಂದು ತಿಳಿದು ಬಂದಿದೆ. ಐವರ ವಿರುದ್ಧ ತುಂಗನಗರ ಪೊಲೀಸ್ ಠಾಣೆಯಲ್ಲಿ ತೋಹಿದ್ ದೂರು ದಾಖಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು