News Karnataka Kannada
Monday, May 06 2024
ಶಿವಮೊಗ್ಗ

ಶಿವಮೊಗ್ಗ: ಎನ್ ಪಿಎಸ್ ರದ್ದತಿಯ ಹೋರಾಟವನ್ನು ಮಾರ್ಚ್ ನಂತರ ನಡೆಸಲಾಗುವುದು- ಷಡಾಕ್ಷರಿ

Shimoga: Fight for nps abolition to be held after March: Shadakshari
Photo Credit : By Author

ಶಿವಮೊಗ್ಗ: ಎನ್ ಪಿಎಸ್ ರದ್ದತಿಯ ಹೋರಾಟವನ್ನು ಮಾರ್ಚ್ ನಂತರ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎನ್ ಪಿಎಸ್ ರದ್ದು ಮಾಡಿ ಒಪಿಎಸ್ ನ್ನ ತರಬೇಕೆಂದು ಈಗ ಒಂದು ಗುಂಪು ಬೆಂಗಳೂರಿನಲ್ಲಿ ಹೋರಾಟ ನಡೆಸುತ್ತಿದೆ. ಆದರೆ 7 ನೇ ಹಣಕಾಸು ಆಯೋಗ ಜಾರಿಯಾಗುವ ತನಕ ಸರ್ಕಾರಿ ನೌಕರರ ಸಂಘ ಸುಮ್ಮನಿರಲಿದೆ. ಜಾರಿಯಾದ ನಂತರ ತನ್ನ ನಿಲುವನ್ನ ಪ್ರಕಟಿಸಲಿದೆ ಎಂದರು.

ಎನ್ ಪಿ ಎಸ್ ರದ್ದತಿಗಾಗಿ ಸರ್ಕಾರಿ ನೌಕರರು ದಿಡೀರ್ ಅಂತ ಪ್ರತಿಭಟನೆಗೆ ಕುಳಿತರೆ ಕಚೇರಿಗಳು ಬಾಗಿಲು ಹಾಕಬೇಕಾಗುತ್ತದೆ. ಕಳೆದ ಎರಡು ವರೆ ವರ್ಷದಿಂದ ಸರ್ಕಾರಿ ನೌಕರರ ಸಂಘದಲ್ಲಿ ರಾಜ್ಯಾಧ್ಯಕ್ಷನಾಗಿ ನೌಕರರ ಪರ 22 ಆದೇಶವನ್ನ ಸರ್ಕಾರದಿಂದ ಹೊರಡಿಸಲು ಶ್ರಮಿಸಿದ್ದೇನೆ. ಯಾವ ಅಧ್ಯಕ್ಷರು ಮಾಡದ ಕೆಲಸವನ್ನ ಮಾಡಿ ತೋರಿಸಿದ್ದೇನೆ.

ಎರಡು ವರೆ ವರ್ಷದ ನಂತರ ಈಗ ಷಡಾಕ್ಷರಿಗೆ ಎನ್ ಪಿಎಸ್ ನೆನಪಾಗಿದೆಯಾ ಎಂದು ಬೇರೆಯವರಿಗೆ ಅನಿಸಬಹುದು. ಎರಡುವರೆ ವರ್ಷದಿಂದ ನಾವು ಎನ್ ಪಿಎಸ್ ಗೆ ಮೊದಲು ಕೈಹಾಕಿದರೆ ಉಳಿದ 22 ಕೆಲಸಗಳು ಆಗ್ತಾ ಇರಲಿಲ್ಲವೆಂದು ಸ್ಪಷ್ಟಪಡಿಸಿದರು.

ಎನ್ ಪಿಎಸ್ ನೌಕರರ ಸಂಘದಿಂದ ಪ್ರತಿಭಟನೆ. ಸಮಯ ಸಂದರ್ಭ ನೋಡಿಕೊಂಡು ಸಂಘ ಹೋರಾಟಕ್ಕೆ ಇಳಿಯಲಿದೆ.ಇನ್ನು ಸರ್ಕಾರಿ ಹುದ್ದೆಗಳ ಬಗ್ಗೆ ಭರ್ತಿ ಬಗ್ಗೆ ಮಾತನಾಡಿ, ಸರ್ಕಾರ ಭರ್ತಿ ಮಾಡಿಕೊಳ್ಳಲು ಹೋದರೆ ನ್ಯಾಯಾಲಯಕ್ಕೆ ಹೋಗ್ತಾರೆ. ಇನ್ನು ಹೊರಗುತ್ತಿಗೆ ನೌಕರರನ್ನ ತೆಗೆದುಕೊಂಡರೆ ಏಜೆನ್ಸಿಯವರಿಂದ ಸಮಸ್ಯೆಯಾಗುತ್ತಿದೆ. ಹೊರಗುತ್ತಿಗೆ, ಏಜೆನ್ಸಿ ಮೂಲಕ ನೇಮಕಾತಿಗಳನ್ನ ರದ್ದು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವೆ ಎಂದರು.

ಈ ಹಿಂದೆ ಮಾಧ್ಯಮವೊಂದರಲ್ಲಿ ಎನ್ ಪಿಎಸ್ ಬಗ್ಗೆ ಸಂದರ್ಶನ ನೀಡಿದ್ದ ರಾಜ್ಯ ನೌಕರರ ಸಂಘದ ಅಧ್ಯಕ್ಷರ ಹೇಳಿಕೆ ವಿರುದ್ಧ ಭಾರಿ ವಿರೋಧ ವ್ಯಕ್ತಪಡಿಸಲಾಗಿತ್ತು. ಆದರೆ ಈಗ ಆ ಹೋರಾಟದ ಬಗ್ಗೆ ಸಂಘದ ಸ್ಪಷ್ಟ ನಿಲುವು ಹೊರಹಾಕಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು