ಶಿವಮೊಗ್ಗ: ದಸರಾ 2022 ಮಹೋತ್ಸವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಶಿವಮೊಗ್ಗ ತಹಶಿಲ್ದಾರ್ ನಾಗರಾಜ್ ಅಂಬು ಕಡಿದರು.
ಇತ್ತ ಅಂಬು ಕಡಿಯುತ್ತಿದ್ದಂತೆ ಅತ್ತ ರಾವಣ ಪ್ರಕೃತಿ ಹೊತ್ತಿ ಉರಿದಿದೆ. ರಾವಣನ ಪ್ರತಿಕೃತಿಯನ್ನ ಪಟಾಕಿ ತುಂಬಿಸಿ ಸಿಡಿಸಲಾಯಿತು. ಈ ಸಂಭ್ರಮದ ಕ್ಷಣವನ್ನ ಸಾವಿರಾರು ಜನ ಕಣ್ತುಂಬಿಕೊಂಡರು.
ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ನಡೆದ ವಿಶಿಷ್ಠ ಸಂಭ್ರಮದ ಬನ್ನಿಮುಡಿಯುವ ಕಾರ್ಯಕ್ರಮಕ್ಕೆ ಸಾವಿರಾರು ಜನ.ಸಾಕ್ಷಿಯಾದರು.ತಹಶೀಲ್ದಾರ್ ನಾಗರಾಜ್ ಅವರು ಅಂಬು ಕಡಿಯುತ್ತಿದ್ದಂತೆ ಜನರು ಘೋಷಣೆ.ಕೂಗಿ ಸಂಭ್ರಮಿಸಿದರು.
ಪರಸ್ಪರರು ಬನ್ನಿ ಹಂಚಿಕೊಳ್ಳಲಾಯಿತು ಬನ್ನಿ ಮುಡಿದು ಬಾಳು ಬಂಗಾರವಾಗಲಿ ಎಂದು ಜನ ಹಾರೈಸಿದರು.ಬನ್ನಿ ಮಂಟಪದ ಮೇಲೆ ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಬನ್ನಿ ಹಂಚಿಕೊಂಡರು.
ಅಂಬು ಕಡಿಯುವ ಕಾರ್ಯಕ್ರಮದಲ್ಲಿ ಸಂಸದ ಬಿವೈ ರಾಘವೇಂದ್ರ ಹಾಗೂ ಶಾಸಕ ಕೆ ಎಸ್ ಈಶ್ವರಪ್ಪ ಹಾಗೂ ಪರಿಷತ್ ಸದಸ್ಯ ಡಿಎಸ್ ಆರುಣ್ ಭಾಗಿ.