News Karnataka Kannada
Saturday, May 04 2024
ಶಿವಮೊಗ್ಗ

ಶಿವಮೊಗ್ಗ: ಸಚಿವ ಸ್ಥಾನ ಸಿಕ್ಕರೆ ಸ್ವೀಕರಿಸಲು ಸಿದ್ದನೆಂದ ಮಾಜಿ ಸಚಿವ ಈಶ್ವರಪ್ಪ

Ready to accept ministerial berth
Photo Credit : By Author

ಶಿವಮೊಗ್ಗ: ಸಚಿವ ಸ್ಥಾನ ದೊರೆಯಲಿ ಎಂಬ ಆಸೆ ಇತ್ತು ಆದರೆ ಆ ಆಸೆಯಿಂದ ಈಗ ಹೊರಬಂದಿರುವುದಾಗಿ ಮಾಜಿ ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಅವರು ಮಾಧ್ಯಮಗಳ ಜೊತೆ ಮಾತನಾಡಿ, ಮಂತ್ರಿ‌ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಪ್ರಯತ್ನ ಮುಂದುವರೆಸಿರಬಹುದು. ಆದರೆ ನನ್ನ ಮೇಲೆ ಬಂದ ಆರೋಪದಿಂದ ಕಳಂಕಿತನಾಗಿದ್ದರಿಂದ ಸಚಿವ ಸ್ಥಾನ ದೊರೆಯಲಿ ಎಂಬ ಆಸೆ ಇತ್ತು. ಆದರೆ ಆ ಆಸೆಯಿಂದ ಹೊರಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಆದರೂ ಸಚಿವ ಸ್ಥಾನ ಸಿಕ್ಕರೆ ಸ್ವೀಕರಿಸಲು ಸಿದ್ದನೆಂದು ಸ್ಪಷ್ಟಪಡಿಸಿದರು. ಹಾಲಿ ಶಾಸಕರಿಗೆ ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಹೈ ಕಮ್ಯಾಂಡ್ ಏನು ಮಾಡಲಿದೆಯೋ ಗೊತ್ತಿಲ್ಲ. ಆದರೆ ನ್ಯಾಯಬದ್ಧ ತಂತ್ರಗಾರಿಕೆಯ ಮೂಲಕ ಚುನಾವಣೆ ಎದುರಿಸಲಿದ್ದೇವೆ.

ನಾನಾ ತಂತ್ರಗಾರಿಕೆಯೊಂದಿಗೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಎದುರಿಸಲಿದ್ದುಗಿನ್ನಿಸ್ ದಾಖಲೆಯ ಫಲಿತಾಂಶ ಪಡೆಯಲಿದ್ದೇವೆ ಎಂಬ ವಿಶ್ವಾಸವಿದೆ ಎಂದರು. ಈ ಬಾರಿ ಚುನಾವಣೆ ರಂಗೇರಲಿದ್ದು ರಾಜ್ಯದಲ್ಲಿ ನಾಯಕರು ಚುನಾವಣೆ ಪ್ರಚಾರ ಮುಗಿಯುವವರೆಗೂ ಪ್ರಮುಖ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ ನಡ್ಡಾ ಮೊದಲಾದ ನಾಯಕರು ಭೇಟಿ ಕೊಡಲಿದ್ದಾರೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು