ಶಿವಮೊಗ್ಗ: ಸಚಿವ ಸ್ಥಾನ ದೊರೆಯಲಿ ಎಂಬ ಆಸೆ ಇತ್ತು ಆದರೆ ಆ ಆಸೆಯಿಂದ ಈಗ ಹೊರಬಂದಿರುವುದಾಗಿ ಮಾಜಿ ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಅವರು ಮಾಧ್ಯಮಗಳ ಜೊತೆ ಮಾತನಾಡಿ, ಮಂತ್ರಿಮಾಡುವ ಬಗ್ಗೆ ಮುಖ್ಯಮಂತ್ರಿಗಳು ಪ್ರಯತ್ನ ಮುಂದುವರೆಸಿರಬಹುದು. ಆದರೆ ನನ್ನ ಮೇಲೆ ಬಂದ ಆರೋಪದಿಂದ ಕಳಂಕಿತನಾಗಿದ್ದರಿಂದ ಸಚಿವ ಸ್ಥಾನ ದೊರೆಯಲಿ ಎಂಬ ಆಸೆ ಇತ್ತು. ಆದರೆ ಆ ಆಸೆಯಿಂದ ಹೊರಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಆದರೂ ಸಚಿವ ಸ್ಥಾನ ಸಿಕ್ಕರೆ ಸ್ವೀಕರಿಸಲು ಸಿದ್ದನೆಂದು ಸ್ಪಷ್ಟಪಡಿಸಿದರು. ಹಾಲಿ ಶಾಸಕರಿಗೆ ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಹೈ ಕಮ್ಯಾಂಡ್ ಏನು ಮಾಡಲಿದೆಯೋ ಗೊತ್ತಿಲ್ಲ. ಆದರೆ ನ್ಯಾಯಬದ್ಧ ತಂತ್ರಗಾರಿಕೆಯ ಮೂಲಕ ಚುನಾವಣೆ ಎದುರಿಸಲಿದ್ದೇವೆ.
ನಾನಾ ತಂತ್ರಗಾರಿಕೆಯೊಂದಿಗೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಎದುರಿಸಲಿದ್ದುಗಿನ್ನಿಸ್ ದಾಖಲೆಯ ಫಲಿತಾಂಶ ಪಡೆಯಲಿದ್ದೇವೆ ಎಂಬ ವಿಶ್ವಾಸವಿದೆ ಎಂದರು. ಈ ಬಾರಿ ಚುನಾವಣೆ ರಂಗೇರಲಿದ್ದು ರಾಜ್ಯದಲ್ಲಿ ನಾಯಕರು ಚುನಾವಣೆ ಪ್ರಚಾರ ಮುಗಿಯುವವರೆಗೂ ಪ್ರಮುಖ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ ನಡ್ಡಾ ಮೊದಲಾದ ನಾಯಕರು ಭೇಟಿ ಕೊಡಲಿದ್ದಾರೆ ಎಂದರು.