ಶಿವಮೊಗ್ಗ: ಎರಡು ಮೂರು ದಿನಗಳಿಂದ ನಡೆಯುತ್ತಿರುವ ಭಾವಚಿತ್ರಗಳ ನಡುವಿನ ಬಡಿದಾಟದಲ್ಲಿ ಶಿವಮೊಗ್ಗ ನಗರ ಅಕ್ಷರಶಃ ನಲುಗಿದೆ. ಇದೇ ಮಾಲ್ ಎದುರು ಹಿಂದೂ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಾಲ್ ನಲ್ಲಿ ಭರ್ಮಪ್ಪ ನಗರದ ನಿವಾಸಿ ಝಾಕಿರ್ ಹುಸೇನ್ ಎಂಬುವರ ತಂಗಿಯ ಮಗ 17 ವರ್ಷದ ಬಾಲಕ ಮಾಲ್ ಗೆ ತೆರಳಿದಾಗ ಘೋಷಣೆ ಕೂಗಲಾಗಿದೆ. ಘೋಷಣೆಯನ್ನ ಕಂಡು ಹೆದರಿಕೊಂಡು ಮನೆಗೆ ತೆರಳಲು ಮುಂದಾಗುತ್ತಾನೆ. ಕೇಸರಿ ಧ್ವಜ ಹಿಡಿದುಕೊಂಡು ಬಂದ ಕೇಸರಿ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಎಫ್ಐಆರ್ ನಲ್ಲಿ ಹೆಸರಿಸಲಾಗಿದೆ.
17 ವರ್ಷದ ಯುವಕನ ಕುತ್ತಿಗೆ, ಎದೆ ಮತ್ತು ಪಕ್ಕೆಯ ಮೇಲೆ ಹಲ್ಲೆ ನಡೆಸಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಜನರು ಮುಂದೆ ಬಂದು ಯುವಕನನ್ನ ರಕ್ಷಿಸಿ ನಂತರ ಪೊಲೀಸರಿಗೆ ಒಪ್ಪಿಸಿರುತ್ತಾರೆ. ಈ ಬಗ್ಗೆ ಝಾಕಿರ್ ಹುಸೇನ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 10-15 ಜನರ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್ಐ ಆರ್ ದಾಖಲಿಸಿದ್ದಾರೆ.
ಶಿವಮೊಗ್ಗ ನಗರ ಹಾಗೂ ಭದ್ರಾವತಿ ಪಟ್ಟಣ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜುಗಳು ದಿನಾಂಕ 17/08/2022 ರಂದು ಎಂದಿನಂತೆ ನಡೆಯಲಿದೆ – ಜಿಲ್ಲಾಧಿಕಾರಿ ಶಿವಮೊಗ್ಗ