ವಿಐಎಸ್ ಎಲ್ ನ್ನ ಶಾಶ್ವತವಾಗಿ ಬಂದ್ ಮಾಡಲು ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿದ್ದಾರೆ.
ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆಯನ್ನ ಬಂದ್ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಸಂಸತ್ ಸದಸ್ಯಬಿ.ವೈ.ರಾಘವೇಂದ್ರ ಕಾರ್ಖಾನೆಯನ್ನ ಉಳಿಸಲು ಯತ್ನಿಸಿದ್ದರು. ಆದರೆ ಯಾವುದೇ ಫಲಕೊಟ್ಟಿಲ್ಲವೆಂದರು. ದೇಶದಲ್ಲಿ ಅನೇಕ ರೋಗಗ್ರಸ್ತ ಕಾರ್ಖಾನೆಗಳನ್ನ ಬಂದ್ ಮಾಡಲಾಗುತ್ತಿದೆ. ಅದರಂತೆ ಭದ್ರಾವತಿ ವಿಐಎಸ್ ಎಲ್ ನ್ನ ಮುಚ್ಚಲಾಗುತ್ತೊದೆ ಮಾಡಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಹೇಗೆ ರಾಜಕೀಯ ದಾಳವಾಗಲಿದೆ ಇನ್ನೂ ಕಾದು ನೋಡಬೇಕಿದೆ. ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಅನೇಕ ಹೋರಾಟ ನಡೆಸಲಾಗುತ್ತಿತ್ತು. ಇಂದು ಸಹ ಕಾರ್ಖಾನೆ ಉಳಿಸಬೇಕೆಂಬ ನಿಟ್ಟಿನಲ್ಲಿ ಕಾರ್ಖಾನೆ ಮುಂಭಾಗ ಪ್ರತಿಭಟನೆ ಮುಂದುವರೆದಿದೆ.