ಶಿವಮೊಗ್ಗ: ಅಡಿಕೆ ವ್ಯಾಪಾರಕ್ಕೆ ತಂದ ಹಣವನ್ನ ವಾಹನದ ಚಾಲಕನೇ ಲಫ್ಡಾಯಿಸಿರುವ ಘಟನೆ ನಡೆದಿದೆ. ಚನ್ನಗಿರಿಯ ಕೆರೆಬಿಳಚಿ ಗ್ರಾಮದಿಂದ ಶಿಕಾರಿಪುರದ ಜಟ್ ಪಟ್ ನಗರಕ್ಕೆ ಬಂದ ವೇಳೆ ಇದ್ದ ಹಣ ನಮಾಜ್ ಮುಗಿಸಿಕೊಂಡು ಬರುವದರೊಳಗೆ ಹಣನೂ ಇಲ್ಲ ಜೊತೆಗೆ ಚಾಲಕನೂ ಪರಾರಿ ಆಗಿದ್ದಾನೆ.
ಚನ್ನಗಿರಿ ತಾಲೂಕು ಕೆರೆಬಿಳಚಿ ಗ್ರಾಮದ ನಿವಾಸಿ ಮೊಹ್ಮದ್ ಇಮ್ರಾನ್ ತನ್ನ ವಾಹನದ ಚಾಲಕ ಮೊಹ್ಮದ್ ಮುಮಿಯಾಜ್ ಮತ್ತು ಸ್ನೇಹಿತ ಅಮ್ಜದ್ ಜೊತೆ ಹೂಂಡೈ ಕ್ರೇಟಾ ಕಾರಿನಲ್ಲಿ ಅಡಿಕೆ ಕಣ ನೋಡಲು ಶಿಕಾರಿಪುರದ ಜಟ್ ಪಟ್ ನಗರದ ನಿವಾಸಿ ಆಸೀಫ್ ಮನೆಗೆ ಬರುತ್ತಾರೆ.
ಆಸೀಫ್ ಮನೆಯ ಒಳಗೆ ಬಂದ ಇಮ್ರಾನ್ ಜೊತೆಯಲ್ಲಿ ತಂದಿದ್ದ 8.50 ಲಕ್ಷ ರೂ ಸೀಟಿನ ಕೆಳಗೆ ಇಟ್ಟಿದ್ದು ಚಾಲಕ ಮುಮಿಯಾಜ್ ಗೆ ನಮಾಜ್ ಮುಗಿಸಿ ಬರುವೆ ಹಣ ಇಟ್ಟಿದ್ದೇನೆ ಜೋಪಾನ ಎಂದು ತಿಳಿಸಿ ಹೋಗಿದ್ದಾರೆ.
ಸ್ನೇಹಿತನೊಂದಿಗೆ ಮಾತನಾಡಿ, ನಮಾಜ್ ಮುಗಿಸಿ ಕಾರಿನ ಬಳಿ ಬಂದು ನೋಡಿದಾಗ ಮುಮಿಯಾಜ್ ಕಾರಿನ ಬಳಿ ಇರಲಿಲ್ಲ. ಸೀಟಿನ ಕವರ್ ಕೆಳಗೆ ಇಟ್ಟ 8.50 ಲಕ್ಷ ರೂ ಸಹ ಇರಲಿಲ್ಲ. ಊಟಕ್ಕೆ ಹೋಗಿರ ಬಹುದು ಎಂದು ಅನೇಕ ಹೊತ್ತಿನ ವರೆಗೆ ಕಾದರೂ ಆತ ಬರುವ ಲಕ್ಷಣ ಕಂಡು ಬರಲಿಲ್ಲ.
ಆತನ ಮೊಬೈಲ್ ಗೆ ಕರೆ ಮಾಡಿದರೆ ಸ್ವಿಚ್ ಬರುತ್ತಿತ್ತು. ನಂತರ ಆಸೀಫ್ ಮನೆಯಲ್ಲಿದ್ದ ಕೆಎ-02-ಕೆಎ-6796 ಕ್ರಮ ಸಂಖ್ಯೆಯ ಬೈಕ್ ಸಹ ಕಾಣುತ್ತಿರಲಿಲ್ಲ. ಎಲ್ಲಿ ಹುಡುಕಿದರೂ ಕಾಣದ ಕಾರಣ ಚಾಲಕನ ಊರಾದ ಮಲೇಬೆನ್ನೂರಿಗೆ ಹೋಗಿ ಬಂದರೂ ಆತನ ಪತ್ತೆಯಾಗಲಿಲ್ಲ. ನಂತರ ಶಿಕಾರಿಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.