ಶಿವಮೊಗ್ಗ: ನಗರದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಶಿವಮೊಗ್ಗ-2023ರಲ್ಲಿ ನಡೆದ ಒಟ್ಟು 26 ಸ್ಪರ್ಧೆಗಳಲ್ಲಿ ಶಿವಮೊಗ್ಗ ಜಿಲ್ಲೆ ಒಟ್ಟು 13 ಬಹುಮಾನ ಗಳಿಸಿದೆ.
ಚದ್ಮಾ ಸ್ಪರ್ಧೆ, ಶಿವಮೊಗ್ಗದ ತೀರ್ಥಹಳ್ಳಿಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕೃತಿಕಾ ಕೆ 5 ನೇ ಸಮಾಧಾನಕರ ಬಹುಮಾನ. ಉರ್ದು ಭಾಷಣದಲ್ಲಿ ಸಾಗರದ ಅಜಿಕೋಯ ಶಾಲೆಯ ಸಖೀನ ತೃತೀಯ ಬಹುಮಾನ
ತಮಿಳು ಭಾಷಣದಲ್ಲಿ ಭದ್ರಾವತಿ ಹಳೇನಗರದ ಸಂಚಿ ಹೊನ್ನಮ್ಮ ಶಾಲೆಯ ನೇಹಾ ದ್ವಿತೀಯ ಬಹುಮಾನ, ಧಾರ್ಮಿಕ ಪಠಣ(ಸಂಸ್ಕೃತ) ಸಾಗರದ ಸೇವಾ ಸಾಗರ್ ಶಾಲೆಯ ಶರ್ಮದಾ ಟಿ.ಆರ್ ತೃತೀಯ ಬಹುಮಾನ,
ಜಾನಪದ ಗೀತೆ ಸ್ಪರ್ಧೆಯಲ್ಲಿ ಸಾಗರದ ಎಮ್ ಜಿ ಎನ್ ಪೈ ಪ್ರೌಢಶಾಲೆಯ ಸಿಂಚನ ಆರ್ ಸಮಾಧಾನಕರ ಬಹುಮಾನ, ಕನ್ನಡ ಭಾಷಣದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಕೆ.ಪಿ.ಎಸ್ ಶಾಲೆಯ ನಿರ್ಮಿತ ಸಮಾಧಾನಕರ ಬಹುಮಾನ,
ಭರತನಾಟ್ಯ ಸ್ಪರ್ಧೆಯಲ್ಲಿ ಜಿಲ್ಲೆಯ ಕೇಡಲಸರ ಜಿ.ಹೆಚ್.ಎಸ್ ಶಾಲೆಯ ರಮಾ ಕಿರಗೂಡಿಗೆ 2 ನೇ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ. ರಸ ಪ್ರಶ್ನೆಯಲ್ಲಿ ತೀರ್ಥಹಳ್ಳಿಯ ವಾಗ್ದವಿ ಶಾಲೆಯ ಅನ್ವಿತ ಎಸ್ ಭಟ್, ಧೃತಿ ಎಮ್ ಆರ್ ಇಬ್ಬರಿಗೆ 2 ನೇ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.
ಕವ್ವಾಲಿ ಸ್ಪರ್ಧೆಯಲ್ಲಿ ಭದ್ರಾವತಿ ಹಳೇನಗರದ ಸರ್ಕಾರಿ ಉರ್ದು ಪ್ರೌಢಶಾಲೆಯ ನಶ್ರ, ಅಮೀನಾ ಖಾನಂ, ಆಫೀಪಾ ಕೌನಯನ್, ಶರ್ ಪುನ್ನಿಸಾ, ಸೈಯದ್ ಸಾದಿಕ್ ಫಾತೀಮಾ ಬಾಯಿ ತಂಡ ದ್ವಿತೀಯ ಬಹುಮಾನ ಗಳಿಸಿದೆ. ಜಾನಪದ ಗೀತೆ ಸ್ಪರ್ಧೆಯಲ್ಲಿ ಸೊರಬ ತಾಲೂಕಿನ ಕಡಸೂರಿನ ಸರ್ಕಾರಿ ಪ್ರೌಢಶಾಲೆಯ ಚಿತ್ರಾ, ನಯನಾ.ಯು, ಸೌಮ್ಯ.ಡಿ, ಗಂಗಮ್ಮ ಹೆಚ್, ವಿನುತಾ ಕೆ.ಪಿ, ಪಂಕಜಾ ಕೆ.ಆರ್ ತಂಡ ಪ್ರಥಮ ಬಹುಮಾನ ಗಳಿಸಿದೆ.
ಚರ್ಚಾ ಸ್ಪರ್ಧೆಯಲ್ಲಿ ಗಾಜನೂರಿನ ಕೆಪಿಎಸ್ ಶಾಲೆಯ ನೀಲಮ್ಮ ಜಿ.ಗೆ ಸಮಾಧಾನಕರ ಬಹುಮಾನ, ಮಿಮಿಕ್ರಿಯಲ್ಲಿ ಶಿವಮೊಗ್ಗ ತಾಲೂಕಿನ ಪುರುದಾಳ್ ಸರ್ಕಾರಿ ಶಾಲೆಯ ದರ್ಶನ್ ಆರ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ.