ಶಿವಮೊಗ್ಗ: ಸ್ನೇಹಿತರೊಂದಿಗೆ ನದಿಗೆ ಈಜಲು ಹೋದ 9ನೇ ತರಗತಿ ವಿದ್ಯಾರ್ಥಿ ತುಂಗ ನದಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಯೂಸಫ್ ಎಂಬ 14 ವರ್ಷದ ಯುವಕ ಇಂದು ಮೂವರು ಸ್ನೇಹಿತರೊಂದಿಗೆ ನದಿಗೆ ಈಜಲು ಹೋಗಿದ್ದು ನೀರು ಪಾಲಾಗಿದ್ದಾನು. ತಕ್ಷಣವೇ ಎಸ್ಡಿಪಿಐ ಕಾರ್ಯಕರ್ತರಿಗೆ ವಿಷಯ ತಿಳಿಸಿದ ಯೂಸಫ್ ಸ್ನೇಹಿತರು ಆತನ ಹುಡುಕಾಟ ಆರಂಭಿಸಿದ್ದಾರೆ.
ನಂತರ ಸ್ಥಳಕ್ಕೆ ಅಗ್ನಿಶಾಮಕ ದಳ, ಸ್ಥಳೀಯರ ಸಹಾಯದಿಂದ ಹುಡುಕಾಟ ಆರಂಭಿಸಲಾಗಿದೆ. ಆತನ ಮೊಬೈಲ್ ನ ಇನ್ಸಟಾ ಗ್ರಾಮ್ ಖಾತೆ ತೆಗೆದು ನೋಡಿದಾಗ ಆತನ ಹೆಸರು ಯೂಸಫ್ ಎಂದು ತಿಳಿದು ಬಂದಿದೆ. ಸುಮಾರು ಒಂದುವರೆ ಗಂಟೆಯಿಂದ ಹುಡುಕಾಟ ನಡೆಸಿದ್ದು ನಂತರ ಆತನ ದೇಹ ದೊರೆತಿದೆ.
ತಕ್ಷಣವೇ ಮೆಗ್ಗಾನ್ ಗೆ ಕರೆದೊಯ್ಯಲಾಗಿದೆ. ವೈದ್ಯರು ಆತನ ಸಾವನ್ನ ದೃಢಪಡಿಸಿದ್ದಾರೆ. ಹುಡುಗನ ಮೃತದೇಹವನ್ನ ಮೆಗ್ಗಾನ್ ಮರಣೋತ್ತರ ಪರೀಕ್ಷೆಯಲ್ಲಿರಿಸಲಾಗಿದೆ
ನಗರದ ಟಿಪ್ಪು ನಗರ 5ನೇ ಕ್ರಾಸ್ ಕೆಕೆ ಶೆಡ್ ಹತ್ತಿರ ವಾಸವಾಗಿರುವ ಯೂಸುಫ್ (14) 9ನೇ ತರಗತಿಯ ವಿದ್ಯಾರ್ಥಿಯಾಗಿದ್ದನು. ಬಾಲಕ ಲಷ್ಕರ್ ಮೊಹಲ್ಲಾ ಸರ್ಕಾರಿ ಶಾಲೆಯ ವಿದ್ಯಾರ್ಥಿ ಆಗಿದ್ದನು. ತುಂಗ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ದೂರು ದಾಖಲಿಸಲಾಗಿದೆ.