ಶಿವಮೊಗ್ಗ: ಎಂ ಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬೆನ್ಬಲ್ಲೇ ಆಯನೂರು ಮಂಜುನಾಥ್. ಬಿಜೆಪಿ ಕಚೇರಿ ಬಳಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿದ್ದಾರೆ.
ನೀತಿ ಸಂಹಿತೆ ಕಾರಣ ಸರ್ಕಾರಿ ಕಚೇರಿ ಬಂದ್ ಆಗಿದೆ.ಕಾರ್ಯಚಟುವಟಿಕೆ ಮುಂದುವರಿಸಲು ಖಾಸಗಿ ಕಚೇರಿ ಆರಂಭಿಸಿದ್ದೇನೆ. ಶಾಸಕರ ಕಾರ್ಯಾಲಯ ಅಂತಾನೇ ಬೋರ್ಡ್ ಹಾಕಿದ್ದೇನೆ ಎಂದರು.
ರಾಜೀನಾಮೆ ನೀಡುವವರೆಗೆ ಶಾಸಕರ ಕಾರ್ಯಾಲಯ ಆಗಿರುತ್ತೆ. ನನ್ನ ನಿರ್ಧಾರಕ್ಕೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ. ಎಲ್ಲ ವರ್ಗದವರು ನನ್ನ ನಿರ್ಧಾರವನ್ನು ಸ್ವಾಗತಿಸಿದ್ದಾರೆ
ಶಾಂತಿಯೆಡೆಗೆ ನನ್ನ ನಿಲುವಿಗೆ ಬೆಂಬಲ ಸಿಕ್ಕಿದೆ. ಕೆಲ ದಿನ ಕಾದು ನಾನು ರಾಜೀನಾಮೆ ನೀಡ್ತೇನೆ. ಪಕ್ಷಗಳ ಅಭ್ಯರ್ಥಿ ಚಿತ್ರಣ ನೋಡಿ ರಾಜೀನಾಮೆ ನೀಡ್ತೇನೆ. ಸ್ಪಷ್ಟ ಚಿತ್ರಣಕ್ಕೆ ಕಾಯ್ತಾ ಇದ್ದೇನೆ. ಎಲ್ಲ ಪಕ್ಷಗಳ ಹೆಜ್ಜೆ ನೋಡಿ ಅಧ್ಯಯನ ಮಾಡಿ ರಾಜೀನಾಮೆ ನೀಡುತ್ತೇನೆ ಎಂದರು.
ಕಾದು ನೋಡುವ ತಂತ್ರಕ್ಕೆ ಆಯನೂರು ಮೊರೆ ಹೋಗಿರುವುದು ಸ್ಪಷ್ಟವಾಗಿದೆ. ಪಕ್ಷದಿಂದ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರಾ? ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಆಯನೂರು ಪಕ್ಷದಿಂದ ತೀರ್ಮಾನ ಅಂತಿಮವಾಗುವವರೆಗೆ ಕಾಯಿರಿ ಎಂದು ಹಿತೈಷಿಗಳು ಸಲಹೆ ನೀಡಿದ್ದಾರೆ. ಹೀಗಾಗಿ ಕಾಯುತ್ತಿದ್ದೇನೆ ಎಂದರು.
ಬಿಜೆಪಿಯಿಂದಲೇ ಸ್ಪರ್ಧಿಸಬೇಕು ಅಂತ ಈಗಲೂ ಇಚ್ಛೆ ಹೊಂದಿದ್ದೇನೆ. ಸ್ಪರ್ಧಿಸುವುದು ನಿಶ್ಚಿತ, ಯಾವುದೇ ಬದಲಾವಣೆಯಿಲ್ಲ. ಈಶ್ವರಪ್ಪ ಬಿಟ್ಟ ಬೇರೆಯವರಿಗೆ ಟಿಕೆಟ್ ನೀಡಿದರೆ ಆಗ ನೋಡೋಣ ಎಂದರು.
ನನ್ನ ಶಾಂತಿ ಮಂತ್ರ ಏಕಾಏಕಿ ಉದ್ಭವಿಸಿದ್ದಲ್ಲ. ಇದು ನನ್ನೊಬ್ಬನದೆ ಪ್ರಕರಣವಲ್ಲ. ಬದಲಾವಣೆ ಗಾಳಿ ಅನೇಕ ಕಡೆ ಬೀಸುತ್ತಿದೆ. ಮುಖಂಡರು ಸ್ಪಂದಿಸಿದರೆ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ. ನಾನ್ಯಾವುದೇ ಬ್ಲ್ಯಾಕ್ ಮೇಲ್ ಮಾಡುತ್ತಿಲ್ಲ. ಬ್ಲ್ಯಾಕ್ ಮೇಲ್ ಗೆ ಒಳಗಾಗುವ ನಾಯಕರು ಜಿಲ್ಲೆಯಲ್ಲಿಲ್ಲ ಎಂದು ಹೇಳಿದರು.
ಕಟೀಲ್ ಫ್ಲೆಕ್ಸ್ ಸಂಬಂಧ ಮಾತಾಡಿದ್ದರು. ಹರಕು ಬಾಯಿ ಅಂತಹ ಫ್ಲೆಕ್ಸ್ ಬೇಡ ಅಂದಿದ್ರು. ಟಿಕೆಟ್ ಕುರಿತು ಚರ್ಚೆಯಾಗಿಲ್ಲ. ಅದಾದ ಮೂರು ದಿನಗಳಲ್ಲಿ ಪಾಲಿಕೆ ಅವರೇ ತೆಗೆದಿದ್ದಾರೆ. ಸರ್ಕಾರಿ ಕಚೇರಿ ಮುಚ್ಚಿದ್ದರಿಂದ ಖಾಸಗಿ ಕಚೇರಿ ತೆರೆದಿದ್ದೇನೆ ಎಂದರು.