ಹೊದ್ದೂರು: ಮಾನವನು ಪರಿಸರದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವನು. ಈ ಹಿನ್ನೆಲೆಯಲ್ಲಿ ಪರಿಸರ ದಿನವನ್ನು ನಿತ್ಯೋತ್ಸವವನ್ನಾಗಿ ಆಚರಿಸುವ ಅಗತ್ಯವಿದೆ. ನೆಟ್ಟ ಗಿಡಗಳನ್ನು ಮಕ್ಕಳಂತೆ ಪೋಷಿಸಿ, ಬೆಳೆಸುವುದು ಪ್ರಜ್ಞಾವಂತ ನಾಗರಿಕರ ಜವಾಬ್ಧಾರಿ ಎಂದು ಹೊದ್ದೂರಿನ ಶ್ರೀ ಶಾಸ್ತಾ ಈಶ್ವರ ದೇವಳ ಸಮಿತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ ಅಭಿಪ್ರಾಯಿಸಿದರು.
ಮೂರ್ನಾಡು ಸಮೀಪದ ಹೊದ್ದೂರಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶ್ರೀ ಶಾಸ್ತಾ ಈಶ್ವರ ದೇಗುಲದ ಆವರಣದಲ್ಲಿ ವಿವಿಧ ಹಣ್ಣಿನ ಸಸಿಗಳನ್ನು ನೆಟ್ಟು ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿ, ದೇಗುಲದ ಆವರಣದ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜಿತವಾಗಿತ್ತು.
ಹವ್ಯಾಸಿ ಪತ್ರಕರ್ತ ಕೂಡಂಡ ರವಿ ಮಾತನಾಡಿ, ದೇವಾಲಯದ ಆವರಣದಲ್ಲಿ ಹಣ್ಣು ಮತ್ತು ಹೂವಿನ ಗಿಡಗಳನ್ನು ಬೆಳೆಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಊರಿನ ಮತ್ತು ಪರವೂರಿನ ಭಕ್ತಾಧಿಗಳು, ಪರಿಸರ ಪ್ರಿಯರು ವಿವಿಧ ಜಾತಿಯ ಹೂವು-ಹಣ್ಣು ಮತ್ತು ಔಷಧೀಯ ಸಸ್ಯಗಳನ್ನು ದೇಣಿಗೆಯಾಗಿ ನೀಡಿ ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿಯ ಉಪಾಧ್ಯಕ್ಷರಾದ ಚೌರೀರ ರಮೇಶ್ ಕಾವೇರಪ್ಪ, ಅಮ್ಮಣಂಡ ಯು. ಪೂಣಚ್ಚ, ಕಾರ್ಯದರ್ಶಿ ಕೂಡಂಡ ಸಾಬಾ ಸುಬ್ರಮಣಿ, ಸಹ ಕಾರ್ಯದರ್ಶಿ ಮೇಕಂಡ ಸುನಿಲ್ ಖಜಾಂಚಿ ಚೆಟ್ಟಿಮಾಡ ಸುನಿ ಲಕ್ಷಣ್, ಸದಸ್ಯರಾಧ ವಾಂಚೀರ ರಾಜಾ ಅಪ್ಪಯ್ಯ, ಚೆಟ್ಟಿಮಾಡ ಗೋಪಾಲ್, ಭಗವಾನ್, ಅಚ್ಚಪಂಡ ಮಂಜು ಮಾಚಯ್ಯ, ಕೋರನ ಪಚ್ಚು ದೇವಿಪ್ರಸಾದ್, ಮೇಕಂಡ ಗಣೇಶ್, ಪೆಮ್ಮಯ್ಯ, ಕೂಡಂಡ ವಸಂತ್, ಸೋಮಣ್ಣ, ನಾಣಯ್ಯ ಸೇರಿದಂತೆ ಗ್ರಾಮಸ್ಥರು, ಭಕ್ತಾಧಿಗಳು ಭಾಗವಹಿಸಿದ್ದರು.
ಈ ಸಂದರ್ಭ ದೇವಳದ ಆವರಣದಲ್ಲಿ ವಿವಿಧ ಹಣ್ಣಿನ ಮತ್ತು ಹೂವಿನ ಮತ್ತು ಕಾಡು ಜಾತಿಯ ಕಸಿಗಿಡಗಳನ್ನು ನೆಡಲಾಯಿತು. ತಮ್ಮ ಸಸ್ಯಗಾರ(ನರ್ಸರಿ)ಯಲ್ಲಿ ಬೆಳೆಸಲಾದ ಗಿಡಗಳನ್ನು ಕಾರ್ಯಕ್ರಮಕ್ಕೆ ಕೂಡಂಡ ರವಿ ಉಚಿತವಾಗಿ ನೀಡಿದ್ದರು.