News Karnataka Kannada
Sunday, April 28 2024
ಶಿವಮೊಗ್ಗ

ಶಿವಮೊಗ್ಗ ತುಂಗಾನಗರ ಪೊಲೀಸ್ ಅಧಿಕಾರಿಗಳಿಂದ ಭಾರೀ ಪ್ರಮಾಣದ ಶ್ರೀಗಂಧ ವಶ

New Project 2021 12 14t084336.528
Photo Credit :

ಶಿವಮೊಗ್ಗ :ಜಿಲ್ಲಾ ರಕ್ಷಣಾಧಿಕಾರಿ .ಬಿ .ಎಂ ಲಕ್ಷ್ಮಿ ಪ್ರಸಾದ್ ಲಕ್ಷ್ಮೀಪ್ರಸಾದ್, ಐ ಪಿ ಎಸ್ .ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್ ಟಿಕಣ್ಣನ್ ಅವರ ಮಾರ್ಗದರ್ಶನದಲ್ಲಿ, ತುಂಗಾ ನಗರ ಠಾಣೆಗೆ ಬಂದ ಖಚಿತ ಮಾಹಿತಿ ಮೇರೆಗೆ ಗಜಾನನ ಸುತಾರ ಪ್ರೊಬೆಶನರಿ ಡಿವೈಎಸ್ ಪಿ ರವರು ತುಂಗಾನಗರ ಪೋಲಿಸ್ ಠಾಣೆಯ ಅಧಿಕಾರಿ ಸಿಬ್ಬಂದಿ, ಶ್ರೀ ಶಂಕರ್ ಡಿಸಿಎಫ್ ಶಂಕರ್ ವಲಯ ಆಲ್ಕೊಳ ಹಾಗೂ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಯವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ, ಶಿವಮೊಗ್ಗ ಟಿಪ್ಪುನಗರದ ಏಳನೇ ಕ್ರಾಸ್ ಗೋಡೋನ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಲಕ್ಷಾಂತರ ರೂಪಾಯಿಗಳ ಬೆಲೆಬಾಳುವ ಸುಮಾರು 910 ಕೆ.ಜಿ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದು. ಈ ಸಂಬಂಧ ಶ್ರೀ ಗಜಾನನ ಸುತಾರ, ಪ್ರೊಬೆಶನರಿ ಡಿವೈಎಸ್ಪಿ ರವರ ದೂರಿನ ಮೇರೆಗೆ ಪ್ರಕರಣ ಅರಣ್ಯ ಇಲಾಖೆಯಲ್ಲಿ ದಾಖಲಿಸಲಾಗಿರುತ್ತದೆ. ಆರೋಪಿ ಅಪ್ಸರ್ ಬಂಧಿಸಲಾಗಿದೆ.

ತುಂಗಾ ನಗರ ಠಾಣೆಯ ಪ್ರೊಬೆಷನರಿ ಡಿವೈಎಸ್ ಪಿ ಗಜಾನನ ಸುತಾರ, ಇನ್ಸ್ ಪೆಕ್ಟರ್ ದೀಪಕ್ ಹೆಗ್ಡೆ ಹಾಗೂ ಸಿಬ್ಬಂದಿ ರವರ ಕಾರ್ಯಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಪೊಲೀಸರು ವಶಪಡಿಸಿಕೊಂಡ ಭಾರೀ ಪ್ರಮಾಣದ ಶ್ರೀಗಂಧ ಇದಾಗಿರುತ್ತದೆ ಪ್ರೊಬೆಶನರಿ ಡಿವೈಎಸ್ಪಿ ಗಜಾನನ ಸುತಾರ ರವರು ನೀಡಿದ ದೂರಿನಂತೆ ಅರಣ್ಯಾಧಿಕಾರಿಗಳು ಪ್ರಕರಣವನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮ ಮತ್ತು ತನಿಖೆಯನ್ನು ಕೈಗೊಂಡಿದ್ದಾರೆಂದು ತಿಳಿದುಬಂದಿದೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು